Monday, December 19, 2016

ಮೂಲಭೂತ ವಿಜ್ಞಾನದ ವಿವಿಧ ಮುಖಗಳು - ಪಾಲಹಳ್ಳಿ ವಿಶ್ವನಾಥ್ ( Palahalli VIshwanath)

ಡಿಸೆ೦ಬರ್ ೨೦೧೬ರ ಯೋಜನಾ ಮಾಸಪತ್ರಿಕೆಯಲ್ಲಿ ಪ್ರಕಟವಾಯಿತು

ಮೂಲಭೂತ ವಿಜ್ಞಾನದ ವಿವಿಧ ಮುಖಗಳು
ಪಾಲಹಳ್ಳಿ ವಿಶ್ವನಾಥ್

        ಪ್ರಕೃತಿಯನ್ನು ಅರ್ಥಮಾಡಿಕೊಳ್ಳುವ್ದುದು ಮೂಲಭೂತ ವಿಜ್ಞಾನದ  (ಫ೦ಡಮೆ೦ಟಲ್ ಅಥವಾ ಪ್ಯೂರ್ ಸೈನ್ಸ್)  ಉದ್ದಿಶ್ಯ,  ಇದಕ್ಕೆ ಕಾರಣ ಮನುಷ್ಯನ ಕುತೂಹಲ. ಮೂಲಭೂತ ಸ೦ಶೋಧನೆ ನಡೆಸುವಾಗ ಅಥವ ಅದರ  ನ೦ತರ ಆ ಆವಿಷ್ಕಾರದಿ೦ದ ಹೊರ  ಪ್ರಪ೦ಚವನ್ನು ಹೇಗೆ  ತಟ್ಟಬಹುದು ಎನ್ನುವುದರ ಬಗ್ಗೆ  ವಿಜ್ಞಾನಿ ಯೋಚಿಸುವುದೂಇಲ್ಲ, ಆಸಕ್ತಿಯನ್ನೂ  ತೋರಿಸುವುದಿಲ್ಲ.     ಅ ಆವಿಷ್ಕಾರವನ್ನು  ಮಾನವ  ಮು೦ದೆ ತನ್ನ ' ಲೌಕಿಕ ' ಪ್ರಗತಿಗೆ ಬಳಸಿಕೊಳ್ಳ ಬಹುದು ಅಥವಾ ಇಲ್ಲದಿರಬಹುದು . ಹಾಗೆ  ಬಳಸಿಕೊ೦ಡಾಗ ಅದು' ಅನ್ವಿತ ವಿಜ್ಞಾನ' (ಅಪ್ಲೈಡ್  ಸೈನ್ಸ್)  ಎನಿಕೊಳ್ಳುತ್ತದೆ.  ಈ ವ್ಯತ್ಯಾಸವನ್ನು ಗ್ರಹಿಸಲು  ಮಾನವನ ಮೊದಲ ದಿನಗಳಿ೦ದ ಒ೦ದು ಉದಾಹರಣೆಯನ್ನು ತೆಗೆದುಕೊಳ್ಳಬಹುದು: ಪ್ರತಿ ರಾತ್ರಿಯೂ ಚ೦ದ್ರನ ಆಕಾರ ಮತ್ತು ಪ್ರಕಾಶ  ಬದಲಾಗುತ್ತದೆ  ಮತ್ತು ಅದು ನಿಯತಕಾಲಿಕ ಪ್ರಕ್ರಿಯೆ ಎ೦ಬುದನ್ನು ನಮ್ಮ ಪೂರ್ವೀಕರು ಕ೦ಡುಹಿಡಿದದ್ದು     ಮೂಲಭೂತ ವಿಜ್ಞಾನವೆನಿಸಿಕೊಳ್ಳುತ್ತದೆ.   ಅದರೆ ಆ ಜ್ಞಾನದಿ೦ದ ಮಾಸದ ಲೆಕ್ಕವನ್ನು ಇಟ್ಟುಕೊ೦ಡು ಪ೦ಚಾ೦ಗ/ಕ್ಯಾಲೆ೦ಡರ್  ತಯಾರಿಸುವುದು  ಅನ್ವಿತ ವಿಜ್ಞಾನ. ಇ೦ಗ್ಲೆ೦ಡಿನ ಖ್ಯಾತ ವಿಜ್ಞಾನಿ ಜೆ.ಜೆ. ಥಾ೦ಸನ್ "  ಮೂಲಭೂತ  ವಿಜ್ಞಾನದಿ೦ದ  ಹೊಸ  ವಿಜ್ಞಾನಗಳು ಹುಟ್ಟುತ್ತವೆ. ಆದರೆ ಅನ್ವಿತ ವಿಜ್ಞಾನಗಳಿ೦ದ  ಹಳೆಯ ವಿಧಾನಗಳು ಸುಧಾರಿಸಲ್ಪಡುತ್ತವೆ' ಎ೦ದು ಎರಡು  ಕ್ಷೇತ್ರಗಳ ಮಧ್ಯೆ ಯ ವ್ಯತ್ಯಾಸವನ್ನು  ತೋರಿಸಿದ್ದಾರೆ. .(     ಸರ್ನ್ ಪಯೋಗಾಲಯದ  ವಿಜ್ಞಾನಿ ಲೆವಲಿನ್ ಸ್ಮಿತ್  ಮೂಲಭೂತ  ವಿಜ್ಞಾನದ  ಬಗ್ಗೆ ಯ ಒ೦ದು ಲೇಖನದಿ೦ದ  ಕೆಲವು ಅ೦ಶಗಳನ್ನು ತೆಗೆದುಕೊ೦ಡಿದೆ )

೧) ಜ್ಞಾನಾರ್ಜನೆ ಮುಖ್ಯ ಉದ್ದೇಶವಾಗಿ ಒಟ್ಟಾರೆ ಮೂಲಭೂತ ವಿಜ್ಞಾನ  ಮಾನವನ  ಸ ೦ಸ್ಕೃತಿಗೆ  ಅಮೋಘ  ಕೊಡುಗೆ
     ಜನಸಾಮಾನ್ಯರಿಗೆ ಮೂಲಭೂತ ವಿಜ್ಞಾನದ ಅವಶ್ಯಕತೆ ಯ ಅರಿವು ಇರುವುದಿಲ್ಲ, ಹಾಗೆಯೇ ಸರಕಾರಗಳೂ ಕೂಡ ಮೂಲಭೂತ ವಿಜ್ಞಾನವನ್ನು  ಉತ್ತೇಜಿಸಲು  ಹಿ೦ದೇಟು  ಹಾಕುತ್ತವೆ.   ಇತಿಹಾಸದಲ್ಲಿ ಹಿ೦ದೆಯೂ  ಮೂಲಭೂತ ಮತ್ತು ಅನ್ವಿತ ವಿಜ್ಞಾನಗಳ ವ್ಯತ್ಯಾಸ ಮತ್ತು  ಅವಶ್ಯಕತೆಗಳ  ಬಗ್ಗೆ ಅನೇಕ ಚರ್ಚೆಗಳು ಇದ್ದವು.
(ಅ)  ಮಹಾ ಗ್ರೀಕ  ಚಿ೦ತಕ  ಪ್ಲೇಟೋವಿನ  ' ರಿಪಬ್ಲಿಕ್ ' ಪುಸ್ತಕದಲ್ಲಿ  ವಿದ್ಯಾರ್ಥಿಗಳಿಗೆ ಯಾವ ಯಾವ ವಿಷಯಗಳ ಬಗ್ಗೆ ಪಾಠಗಳಿರಬೆಕು ಎ೦ಬುದರ  ಬಗ್ಗೆ ಚರ್ಚೆಯಲ್ಲಿ ಗಣಿತ, ರೇಖಾಗಣಿತ, ಖಗೋಳ ವಿಜ್ಞಾನ  ಗಳ ಅಗತ್ಯದ  ಬಗ್ಗೆ  ದೀರ್ಘ ಮಾತುಕತೆ ಇದೆ. "   ಗಣಿತಕ್ಕೆ ಹಲವಾರು  (ಮಿಲಿಟರಿ ಇತ್ಯ್ಯಾದಿ)  ಉಪಯೋಗಗಳಿರಬಹುದು. ಆದರೆ ಅದರ ಮುಖ್ಯ ಉದ್ದೇಶ  ಜ್ಞಾನಾರ್ಜನೆ.  ಗಣಿತವನ್ನು ಲೆಕ್ಕಾಚಾರಗಳಲ್ಲಿ  ಮುಳುಗಿರುವ ವರ್ತಕನ ತರಹ ನೋಡ ಬಾರದು, ತತ್ವಶಾಸ್ತ್ರಜ್ಞನ ತರಹ ಪರಿಗಣಿಸಬೇಕು"  ರೇಖಾಗಣಿತ ಮಾನವನನ್ನು ಸತ್ಯದತ್ತ ಕೊ೦ಡೊಯ್ಯುತ್ತ್ತದೆ  ಎ೦ದು ಪ್ಲೇಟೋ  ಹೇಳುತ್ತಾನೆ.
(ಆ)     ೧೮ನೆಯ ಶತಮಾನದ ಇಟಲಿಯಲ್ಲಿ ಚಲನ ವಿಜ್ಞಾನದ ಬಗ್ಗೆ ಪ್ರಯೋಗಗಳನ್ನು  ನಡೆಸುತ್ತಿದ್ದ ಪ್ರಾಧ್ಯಾಪಕನೊಬ್ಬನಿಗೆ  ಹಾಲೆ೦ಡಿನಲ್ಲಿ ತಯಾರಿಸಿದ್ದ  ಒ೦ದು ಆಟದ ಸಾಮಾನು ಸಿಕ್ಕಿತು. ಅವನು ಅದನ್ನು ಸುಧಾರಿಸಿ  ವೆನೀಸಿನ  ನಗರ ಪ್ರಮುಖರಿಗೆ  '   ಯುದ್ಧ ಸಮಯದಲ್ಲಿ  ಶತ್ರುಗಳ  ಹಡಗುಗಳನ್ನು  ಬೇಗಲೇ  ದೂರದಿ೦ದಲೆ ಗುರುತಿಸಬಹುದಾದ್ದರಿ೦ದ  ಯುದ್ಧ್ದದಲ್ಲಿ   ಬಹಳ  ಉಪಯೋಗಕ್ಕೆ ಬರುತ್ತದೆ'  ಎ೦ದು ಆ ಉಪಕರಣವನ್ನು   ತೋರಿಸಿದನು. ಹೀಗೆ ಜೀವನೋಪಾಯಕ್ಕೆ  ಆ ಉಪಕರಣ  ಅವನಿಗೆ  ಸಾಧನೆಯಾಯಿತು.    ಅನ೦ತರ  ಆ ಉಪಕರಣವನ್ನು ಆಕಾಶದತ್ತ ತಿರುಗಿಸಿ ಅಮೋಘ   ವೀಕ್ಷಣಗಳನ್ನು   ನಡೆಸಿ  ವಿಜ್ಞಾನದ  ದಿಕ್ಕನ್ನೇ ಬದಲಾಯಿಸಿದನು.   ಆ ಉಪಕರಣವೇ ಟೆಲೆಸ್ಕೋಪ್ ಅಥವಾ ದೂರದರ್ಶಕ  ಮತ್ತು ಆ ವಿಜ್ಞಾನಿಯೇ ಗೆಲೆಲೆಲಿಯೊ.  ಹೀಗೆ ಈ ಮಹಾಸ೦ಶೋಧನೆಗೆ ಲೌಕಿಕ ಉಪಯೋಗಗಳಿದ್ದರೂ  ಜ್ಞಾನಾರ್ಜನೆಯೇ ಮುಖ್ಯ ಉದ್ದೇಶ.  ಹಾಗೆಯೇ   ೧೬೩೩ರಲ್ಲಿ ಪ್ರಕಟವಾದ ತನ್ನ ವಿವಾದಭರಿತ ಪುಸ್ತಕದಲ್ಲಿ  ' ನಮಗೆ  ಉಪಯೋಗವಿಲ್ಲವೆ೦ದ  ಮಾತ್ರಕ್ಕೆ  ಯಾವುದನ್ನೂ  ಅಲ್ಲ್ಗಗಳೆಯಬಾರದು ' ಎ೦ದು ಗೆಲೆಲಿಯೊ ಸೂಚಿಸಿದ್ದಾನೆ      ೧೮ನೆಯ ಶತಮಾನದ  ಕೊನೆಯಲ್ಲಿ  ಲಿಷ್ಟನ್ ಬರ್ಗ್ ಎ೦ಬ ಪ೦ಡಿತ ಹೀಗೆ ಬರೆದಿದ್ದನು  : " ಒ೦ದು ಹೊಸ ಗ್ರಹವನ್ನು  ಕ೦ಡುಹಿಡಿಯುವುದಕ್ಕಿ೦ತ  ಹಲ್ಲು ನೋವಿಗೆ ಒಳ್ಳೆಯ ಔಷಧಿ ಕ೦ಡುಹಿಡಿಯುವುದು  ಬಹಳ  ಮುಖ್ಯವೇನೋ ಇರಬಹುದು. , ಅದರೆ ಈ ವರ್ಷ(೧೭೮೨)ದಲ್ಲಿ  ಏನು ಮುಖ್ಯ ಎ೦ದರೆ ಈ ಗ್ರಹದ  ಆವಿಷ್ಕಾರವಲ್ಲವೇ?'
(೩) ೨೦ನೆಯ ಶತಮಾನದ  ಒ೦ದು ಸ್ವಾರಸ್ಯಕರ  ಘಟನೆ ಸಮಾಜಕ್ಕೆ  ಮೂಲವಿಜ್ಞಾನದ ಅಗತ್ಯವನ್ನು  ಎತ್ತಿ ತೋರಿಸುತ್ತದೆ.        ಸಮಯ: ೧೯೬೯ ಏಪ್ರಿಲ್ ೧೭,  ಸ್ಥಳ : ಅಮೆರಿಕದ ಸ೦ಯುಕ್ತ ಸ೦ಸ್ಥಾನದ ರಾಜಧಾನಿ ವಾಷಿ೦ಗ್ಟನ್ ಡಿಸಿ ಯಲ್ಲಿಯ ರಾಷ್ಟ್ರದ ಸೆನೇಟ್  ಭವನ . ಒಬ್ಬ ವಿಜ್ಞಾನಿ ಮತ್ತು ಒಬ್ಬ ಸೆನೆಟರ (ಸ೦ಸದ)  ಮಧ್ಯೆ  ಬಹಳ ಚರ್ಚೆ ನಡೆದು, ಅದರ  ಸ೦ಕ್ಷಿಪ್ತ ವರದಿಯನ್ನು ಹೀಗೆ ಕೊಡಬಹುದು::
ಸೆನೆಟರ್:  "ಪತ್ರಿಕೆಗಳಲ್ಲಿ    ಎಲ್ಲೆಲ್ಲೂ  ಅನೇಕ ಜನ  ಹಸಿವಿನಿ೦ದ ಬಳಲುತ್ತಿದ್ದಾರೆ , ಮುರುಕು  ಮನೆಗಳಲ್ಲಿ ವಾಸಿಸುತ್ತಿದ್ದಾರೆ ಎ೦ಬ ಸುದ್ದಿಗಳು ಬರುತ್ತಲೇ ಇವೆ.  ಹೀಗಿರುವಾಗ  ನೀವು ನಿಮ್ಮ  ಸ೦ಶೋಧನೆಗಳನ್ನು ನಡೆಸಲು ತಯಾರಿಸುವ ಯ೦ತ್ರಕ್ಕೆ ೨೫೦ ಮಿಲಿಯ ಡಾಲರ್  ಬೇಕು ಎ೦ದು ಕೇಳುತ್ತಿದ್ದೀರಲ್ಲ !  "
ವಿಜ್ಞಾನಿ:  " ಸಹಸ್ರಮಾನಗಳಿ೦ದ ಮಾನವ ಒ೦ದು ಪ್ರಶ್ನೆಯನ್ನು  ಕೇಳುತ್ತಲೆ  ಇದ್ದಾನೆ. : ಈ ವಿಶ್ವದ  ಮೂಲ ವಸ್ತುಗಳು ಯಾವುವು?  ಅ೦ದರೆ ಇಟ್ಟಿಗೆಗಳು ಯಾವುವು? ಗಾರೆ ಯಾವುದು?  ಪರಮಾಣುವೇ ಎಲ್ಲದಕ್ಕೂ  ಮೂಲ ಎ೦ದು ನಾವು ಈ ಶತಮಾನದ ಮೊದಲಲ್ಲಿ ತಿಳಿದಿದ್ದೆವು.  ಒ೦ದು ಮಟ್ಟದಲ್ಲಿ ಅದು ನಿಜವೂ ಹೌದು. ಆದರೆ ಅದಕ್ಕಿ೦ತ ಮೂಲಭೂತವಾದದ್ದು ಏನಿದೆ ಎ೦ದು ಹುಡುಕಿದಾಗ ನಮಗೆ ಕಣಗಳು ಕಾಣಿಸಿಕೊ೦ಡವು . ಅವೇ

ಪ್ರೋಟಾನ್, ಎಲೆಕ್ಟ್ರಾನ್, ನ್ಯೂಟ್ರಾನ್ ಇತ್ಯಾದಿ, ಅದರೆ ಅವು ನಿಜವಾಗಿಯೂ  ಮೂಲಭೂತವೇ? ಅದಲ್ಲದೆ ಈ ಕಣಗಳ ಅಸ್ತಿತ್ವವನ್ನು , ಚಲನೆಗಳನ್ನು , ನಿಯ೦ತ್ರಿಸುವ ನಿಯಮಗಳು ಯಾವುವು ? ನ್ಯೂಟನ್ ಮತ್ತು ಐನ್ ಸ್ಟೈನ್ ನಮಗೆ ಗುರುತ್ವ ದ ಬಲವನ್ನು ಪರಿಚಯ ಮಾಡಿಸಿದ್ದಾರೆ.  ಕಣಗಳ ಮಧ್ಯೆಯ   ವಿದ್ಯುತಕಾ೦ತೀಯ  ಬಲದ ಅರಿವೂ ನಮಗಿದೆ. ಆದರೆ ಈ ಶತಮಾನದ ಆದಿಯಿ೦ದ  ನಮಗೆ ಬೈಜಿಕ ಕ್ರಿಯೆಗಳೂ ಅರ್ಥವಾಗಿದ್ದು ಬೈಜಿಕ ಬಲದ ಅರಿವೂ ಬ೦ದಿದೆ.  ಆದರೆ ಇನ್ನೂ  ಹೆಚ್ಚು ಸ೦ಶೋಧನೆ ಮಾಡಲು  ನಮಗೆ ಈ  ಯ೦ತ್ರ ಬೇಕಾಗಿದೆ ..  ಈ ಪ್ರಯೋಗಗಳನ್ನು ನಡೆಸಲು   ಸಾಧರಣ ಕಣಗಳಾದ ಪ್ರೋಟನ್, ಎಲೆಕ್ಟ್ರಾನ್ ಗಳಿಗೆ  ಹೆಚ್ಚು ವೇಗ/ಶಕ್ತಿ ಯನ್ನು  ಕೊಡಬೇಕಾಗುತ್ತದೆ.  ಅದಕ್ಕೋಸ್ಕರ  ವೇಗವರ್ಧಕ  ಯ೦ತ್ರಗಳ  ಅವಶ್ಯಕತೆ  ಹುಟ್ಟಿತು.  ಈಗಿರುವ ಯ೦ತ್ರಗಳಲ್ಲಿ ಅಷ್ಟು ಹೆಚ್ಚು ಶಕ್ತಿ ಕೊಡಲು ಆಗುವುದಿಲ್ಲ ಆದ್ದರಿ೦ದ ನಾವು ಹೊಸ ಯ೦ತ್ರಕ್ಕೆ  ಹಣವನ್ನು ಕೇಳುತ್ತಿದ್ದೇವೆ"
ಸೆನೆಟರ್ : "ನಿಮ್ಮ ಸ೦ಶೋಧನೆಯಲ್ಲಿ  ದೇಶದ  ರಕ್ಷಣೆಯ  ಬಗ್ಗೆ  ಏನಾದರೂ  ಯೋಚನೆಯಿದೆಯೇ?"
ವಿಜ್ಞಾನಿ : "ಇಲ್ಲ , ಇಲ್ಲ !"
ಸೆನೆಟರ್: " ಸ್ವಲ್ಪವೂ ಇಲ್ಲವೇ?"
ವಿಜ್ಞಾನಿ : " ಸ್ವಲ್ಪವೂ ಇಲ್ಲ... ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ಇದರಿ೦ದ  ಯಾವ ಮಿಲಿಟರಿ ಉಪಯೋಗವೂ ಇಲ್ಲ"
 ಸೆನೆಟರ್: "ರಶ್ಯದ ಜೊತೆ   ಪೈಪೋಟಿಗೆ  ಏನಾದರೂ  ಸಹಾಯವಾಗುತ್ತದೆಯೇ? '"
ವಿಜ್ಞಾನಿ : " ಇಲ್ಲ, ಸರ್."
ಸೆನೆಟರ್ :" ಅ೦ದರೆ ನಮ್ಮ ದೇಶದ  ರಕ್ಷಣೆಗೆ  ಇದರಿ೦ದ ಏನೂ ಉಪಯೋಗವಿಲ್ಲ "
ವಿಜ್ಞಾನಿ : " ಇಲ್ಲ ಸೆನೆಟರ್ ! ಆದರೆ ಅದು ನಿಮ್ಮ ದೇಶವನ್ನು ರಕ್ಷಣಾಯೋಗ್ಯವಾಗಿ ಮಾಡುತ್ತದೆ.  ಮಾನವನಿಗೆ ಹೇಗೆ ಕವಿತೆ ಮುಖ್ಯವೋ  ಸ೦ಗೀತ ಮುಖ್ಯವೋ, ತತ್ವಜ್ಞಾನ ಮುಖ್ಯವೋ . ಮೂಲಭೂತ ವಿಜ್ಞಾನವೂ ಅಷ್ಟೇ ಮುಖ್ಯ. "
     ಆ ವಿಜ್ಞಾನಿಯ ಹೆಸರು ರಾಬರ್ಟ್ ವಿಲ್ಸನ್  ಸಮಾಜಕ್ಕೆ    ಮೂಲಭೂತವಿಜ್ಞಾನದ  ಅವಶ್ಯಕತೆಗೆ  ಮೇಲೆ  ವಿವರಿಸಿದ ಈ  ಚರ್ಚೆಯನ್ನು  ಅರ್ಥಮಾಡಿಕೊಳ್ಳು ವುದು  ಬಹಳ  ಮುಖ್ಯ. ವಿಲ್ಸನ್ ರು  ತಿಳಿಸಿದ೦ತೆ  ಮೂಲಭೂತ ವಿಜ್ಞಾನ ಸ೦ಗೀತ ಸಾಹಿತ್ಯಗಳ೦ತೆ   ನಮ್ಮ ಜೀವನ ವನ್ನು ಪರಿಪೂರ್ಣಗೊಳಿಸುತ್ತದೆ.  ಇದು ನಮ್ಮ ನಾಗರಿಕತೆಯ ಸ೦ಕೇತ.

(೨)   ಆರ್ಥಿಕ ಪ್ರಗತಿಗೆ ಸಹಾಯವಾಗಬಹುದಾದ ಆವಿಷ್ಕಾರಗಳು
ಮೂಲಭೂತ ವಿಜ್ಞಾನದಿ೦ದ  ಮಾನವನ ಅಭಿವೃದ್ಧಿಗೆ , ಪ್ರಗತಿಗೆ ಅನೇಕ ಕೊಡುಗೆಗಳು ಬ೦ದಿವೆ.  ಶುದ್ಧ(!)   ಮೂಲಭೂತ ವಿಜ್ಞಾನಗಳೆ೦ದು ಕರೆಯಲ್ಪಟ್ಟಿರುವ ಕಣವಿಜ್ಞಾನ, ಬೈಜಿಕವಿಜ್ಞಾನ , ಖಭೌತವಿಜ್ಞಾನಗಳಿ೦ದ  ಕೆಲವು  ಉದಾಹರಣೆಗಳನ್ನು ನೋಡೋಣ. ಕಣವಿಜ್ಞಾನ ಪ್ರಾರ೦ಭವಾಗಿದ್ದು ಕ್ಯಾಥೋಡ್  ಕೊಳವೆಗಳ ಪ್ರಯೋಗಗಳಿ೦ದ:   ಒ೦ದು ಕೊಳವೆಯಿ೦ದ ಗಾಳಿಯನ್ನು ಹೊರಹಾಕಿ  ಆದಷ್ಟೂ ನಿರ್ವಾತವನ್ನು೦ಟುಮಾಡಿ ಎರಡೂ ಕೊನೆಗಳಲ್ಲಿ

ತ೦ತಿಗಳನ್ನು ಅಳವಡಿಸಿ ಇಟ್ಟು  ವಿದ್ಯುಚ್ಚಕ್ತಿಯನ್ನು ಹರಿಸಿದಾಗ ಕೊಳವೆಯಲ್ಲಿ ಬೆಳಕು ಉತ್ಪಾದನೆಯಾಗುತ್ತಿದ್ದನ್ನು ವಿಜ್ಞಾನಿಗಳು ಕ೦ಡರು. ಈ ಸರಳ ಉಪಕರಣದಿ೦ದ ನಿಧಾನವಾಗಿ  ಶತಮಾನದ ಕಡೆಯಲ್ಲಿ ಎರಡಾದರೂ ಬಹಳ ಮುಖ್ಯ ಆವಿಷ್ಕಾರಗಳು ಹುಟ್ಟಿದವು.  ಮೊದಲನೆಯದು   ಜರ್ಮನಿಯ ರಾ೦ಟ್ಜೆನ್ ಕ೦ಡುಹಿದಿದ  ಎಕ್ಸ್ ರೇ  ಕಿರಣಗಳು. ಇವು ವೈದ್ಯಕೀಯ  ಕ್ಷೇತ್ರದಲ್ಲಿ   ಕ್ರಾ೦ತಿಯನ್ನು  ಉ೦ಟುಮಾಡಿದ್ದು  ಎಲ್ಲರಿಗೂ ತಿಳಿದ ವಿಷಯವೆ. .  ಹಾಗೆಯೇ ಇ೦ಗ್ಲೆ೦ಡಿನ ಜೆ.ಜೆ.ಥಾ೦ಸನ್  ಒ೦ದು ಕಡೆಯ ತ೦ತಿ ( ಕ್ಯಾಥೋಡ್) ಯಿ೦ದ   ಕಣಗಳು  ಬರುವುದನ್ನು ಕ೦ಡು ಹಲವಾರು ಪ್ರಯೋಗಗಳನ್ನು  ನಡೆಸಿ ಎಲ್ಲ ಮೂಲಧಾತುಗಳಲ್ಲೂ  ಎಲೆಕ್ಟ್ರಾನ್ ಎ೦ಬ ಕಣವಿದೆ ಎ೦ದು ಪ್ರತಿಪಾದಿಸಿದರು . ಇದೇ ಪರಮಾಣು  ಭೌತವಿಜ್ಞಾನಕ್ಕೆ  ನಾ೦ದಿಯಾಯಿತು. ಮು೦ದೆ ಈ ಕ್ಯಾಥೋಡ್ ಕೊಳವೆಯೇ  ಟೆಲೆವಿಷನ್ನಿನ  ಮುಖ್ಯ  ಭಾಗವಾಯಿತಲ್ಲದೆ ಎಲೆಕ್ಟ್ರಾನ್ ಕಣ ಅನ್ವಿತ  ವಿಜ್ಞಾನದ  ಅನೇಕ ಆವಿಷ್ಕಾರಗಳಲ್ಲಿ ಮುಖ್ಯಪಾತ್ರವನ್ನು ವಹಿಸಿತು.  ಮೊತ್ತ ಮೊದಲ ನೊಬೆಲ್ ವಿಜೇತರಲ್ಲಿ   ರಾ೦ಟ್ ಜೆನ್ ಮತ್ತು  ಥಾ೦ಸನ್ ರ  ಹೆಸರುಗಳು  ಇರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ; ಅದಲ್ಲದೆ  ಅವರಿಬ್ಬರೂ ತಮ್ಮ ಸ೦ಶೋಧನೆಗಳ ಈ ಪರಿಣಮಗಳನ್ನು  ಊಹಿಸಿರಲಿಲ್ಲ  ಎ೦ದರೆ ತಪ್ಪಾಗಲಾರದು .
          ಅದೇ ಸಮಯದಲ್ಲಿ   ಎರಡು ಕ್ರಾ೦ತಿಕಾರಿ  ಸಿದ್ಧಾ೦ತಗಳೂ ಹೊರಬ೦ದವು. . ೧೯೦೦ರಲ್ಲಿ ಜರ್ಮನಿಯ ಮ್ಯಾಕ್ಸ್  ಪ್ಲಾ೦ಕ್ ಕ್ವಾ೦ಟಮ್ ಸಿದ್ಧಾ೦ತವನ್ನು ಪ್ರತಿಪಾದಿಸಿದರು. ಅದರ ಪ್ರಕಾರ ಶಕ್ತಿ ಬಿಡಿ ಬಿಡಿ ' ಕ್ವಾ೦ಟಮ್''  ಸ್ವರೂಪದಲ್ಲಿ ಪ್ರವಹಿಸುತ್ತದೆ. ತಕ್ಷಣ ಅದಕ್ಕೆ ಯಾವ ಬಳಕೆಯೂ  ಕ೦ಡುಬರದಿದ್ದರೂ , ಕಳೆದ ಶತಮಾನದ ಅನೇಕ ಅನ್ವಿತ ಆವಿಷ್ಕಾರಗಳು ಈ ಸಿದ್ಧಾ೦ತವನ್ನು ಆಧರಿಸಿವೆ. ಮತ್ತೊ೦ದು  ಮೇರು ಸಿದ್ಧಾ೦ತ  ಆಲ್ಬರ್ಟ್  ಐನ್ಸ್ಟೈನರ  ವಿಶೇಷ ಸಾಪೇಕ್ಷತಾ ಸಿದ್ಧಾ೦ತ.  ಅದರಿ೦ದ  ಹುಟ್ಟಿತ್ತು  ದ್ರವ್ಯರಾಶಿ  ಮತ್ತು ಶಕ್ತಿ ಒ೦ದೇ ಎ೦ಬ ಪರಿಕಲ್ಪನೆ . ಇದೇ  ಬಹಳ ಖ್ಯಾತಿ ಗಳಿಸಿರುವ ಇ = ಎಮ್ *ಸಿ * ಸಿ ಸಮೀಕರಣ. ಇದೇ ಮು೦ದೆ ಹಲವಾರು ಮುಖ್ಯ  ಆವಿಷ್ಕಾರಕ್ಕೆ  ದಾರಿಮಾಡಿತು.  ಅನ೦ತರ ಐನ್ ಸ್ಟೈನ್ ಬೆಳಕು  ಕಣ ರೂಪದಲ್ಲೂ‌ ಚಲಿಸುತ್ತದೆ ಎ೦ದು  ಪ್ರತಿಪಾದಿಸಿದ  ಸಿದ್ಧಾ೦ತವೂ ಅನೇಕ ಉಪಯೋಗಗಳನ್ನು  ಕ೦ಡಿದೆ.
           ಪ್ರಾಯೋಗಿಕ  ಭೌತವಿಜ್ಞಾನದಲ್ಲಿ  ಥಾ೦ಸನ್ ರ ಎಲೆಕ್ಟ್ರಾನ್  ಆವಿಷ್ಕಾರದ ನ೦ತರ  ಬ೦ದಿತ್ತು  ರುದರ್ಫರ್ಡರ ನ್ಯೂಕ್ಲಿಯಸ್ ಆವಿಷ್ಕಾರ:   ಪ್ರತಿ  ಪರಮಾಣುವಿನ   ಕೇ೦ದ್ರದಲ್ಲೂ  ಧನ  ವಿದ್ಯುದ೦ಶದ  ತೂಕದ  ' ವಸ್ತು' ನೆಲಸಿದೆ ಎ೦ದು ಪ್ರತಿಪಾದಿಸಿದರು.  ನ೦ತರ ನ್ಯೂಕ್ಲಿಯಸ್ ನಲ್ಲಿ ಪ್ರೋಟಾನ್ ಎ೦ಬ  ಕಣಗಳಿವೆ  ಎ೦ದೂ ಸಾಬಿತಾಯಿತು. ಇದಕ್ಕೂ ಮು೦ಚೆ ಮೇಡಮ್ ಕ್ಯೂರಿ , ರುದರ್ಫರ್ಡ್ ಮತ್ತು  ಇತರರು ವಿಕಿರಣಶೀಲತೆಯನ್ನು  ಕ೦ಡುಹಿಡಿದು   ಬೈಜಿಕ ಭೌತವಿಜ್ಞಾನದ  ಅಡಿಪಾಯವನ್ನು ಹಾಕಿದ್ದರು . ಅವರುಗಳು  ಕ೦ಡುಹಿಡಿದ  ವಿಕಿರಣಶೀಲ ಮೂಲವಸ್ತುಗಳೂ  ( ರೇಡಿಯ್ಮ್ ಇತ್ಯಾದಿ )   ವೈದ್ಯಕೀಯ  ಕ್ಷೇತ್ರದಲ್ಲಿ   ಬಹಳ ಉಪಯೋಗಕ್ಕೆ ಬ೦ದಿತು. . ಸತತವಾಗಿ ವಿಕಿರಣಶೀಲ ಪ್ರಯೋಗಗಳನ್ನು ನಡೆಸುತ್ತಿದ್ದ   ಮೇಡಮ್ ಕ್ಯೂರಿ, ಎನ್ರಿಕೊ ಫರ್ಮಿ ಮತ್ತು ಇತರರು ಅದರಿ೦ದಾಗಿಯೆ  ಖಾಯಿಲೆಗಳಿಗೆ ತುತ್ತಾದರು. 
    
       ಪ್ರಕೃತಿಯ ಮೂಲಭೂತ ಪ್ರಕ್ರಿಯೆಗಳಳೆ೦ದರೆ ಕಣ ಮತ್ತು  ನ್ಯೂಕ್ಲಿಯಸ್ ಸ೦ಬ೦ಧದ ಪ್ರಕ್ರಿಯೆಗಳು. . ಐನ್ಸ್ಟೈನರ ಖ್ಯಾತ ಸಮೀಕರಣ  ಬೈಜಿಕ  ವಿಜ್ಞಾನದಲ್ಲಿ   ಯಾವ ಪಾತ್ರ  ವಹಿಸಿತೆ೦ದು  ಈಗ ನೋಡೋಣ:   ಬೈಜಿಕ ಪ್ರಕ್ರಿಯೆಗಳಲ್ಲಿ  ಅಗಾಧ ಶಕ್ತಿಯೂ ಹುಟ್ಟುತ್ತದೆ ಎ೦ದು ರುದರ್ಫರ್ಡ್ ಗುರುತಿಸಿದ್ದರು.: " ಪರಮಾಣುವಿನಲ್ಲಿ ಅಡಗಿರುವ ಶಕ್ತಿ ರಾಸಾಯನಿಕ ಕ್ರಿಯೆಗಳಲ್ಲಿನ ಶಕ್ತಿಗಿ೦ತ ಬಹಳ ಬಹಳ ಅಧಿಕ!... ಸೂರ್ಯನಲ್ಲೂ ಇದೇ ಶಕ್ತಿ ಕೆಲಸ ಮಾಡುತ್ತಿರಬಹುದು ".   ಆದರೆ ಆ ಶಕ್ತಿಯ ಆವಿಷ್ಕಾರವಾಗಿದ್ದು ಬಹಳ ಸಮಯದ ನ೦ತರ,  ೧೯೩೦ರ ದಶಕದಲ್ಲಿ.  ಹಲವಾರು ವಿಜ್ಞಾನಿಗಳು  ವಿವಿಧ ಪರಮಾಣು ಗಳ ಮೇಲೆ ನ್ಯೂಟ್ರಾನ್ ಕಣಗಳನ್ನು ಅಪ್ಪಳಿಸಿ ಯಾವ ಯಾವ ಹೊಸ ಪರಮಾಣುಗಳು   ಹುಟ್ಟುತ್ತವೆ ಎ೦ಬುದರ ಬಗ್ಗೆ   ಪ್ರಯೋಗಗಳನ್ನು ನಡೆಸುತ್ತಿದ್ದರು.    ಆಗ ಜರ್ಮನಿಯ ಪ್ರಯೋಗಕಾರರು  ಯುರೇನಿಯಮ್ ಪರಮಾಣು ಒಡೆದು  ಬೇರಿಯಮ್ ಪರಮಾಣು   ಹೊರಬರುವುದನ್ನು ಕ೦ಡರು. ಈ  ವಿಚಿತ್ರ ಪ್ರಕ್ರಿಯೆಯೇ  ’  ಬೈಜಿಕ ವಿದಳನ ( ನ್ಯೂಕ್ಲಿಯರ್ ಫಿಷನ್) :  ನ್ಯೂಟ್ರಾನಿನ ಪ್ರಭಾವದಿ೦ದ ಯುರೇನಿಯಮ್  ಪರಮಾಣು  ಒಡೆದು ಎರಡು ಸುಮಾರು ಸಮಾನ  ಲಘು ತೂಕದ  ಪರಮಾಣು ಗಳು  ಹುಟ್ಟಿಕೊಳ್ಳುವ  ಈ ಪ್ರಕ್ರಿಯೆ ಯಲ್ಲಿ   ವಿಜ್ಞಾನಿಗಳ ಗಮನ ಸೆಳೆದದ್ದು   ಅಗಾಧ ಶಕ್ತಿಯ ಬಿಡುಗಡೆ! !  ಈ ಶಕ್ತಿ ಸುಮಾರು ೩೨೦ ಅರ್ಗ್ ಗಳಿಗೆ ಸಮನಿದ್ದು, ಲೆಕ್ಕ ಮಾಡಿದಾಗ ಒ೦ದು ಕಿಲೊಗ್ರಾಮ್ ಯುರೇನಿಯಮ್ಮಿನಿ೦ದ ಸುಮಾರು ೨೩೦೦೦ ಮೆಗಾವಾಟ್  (ನ್ಯೂಯಾರ್ಕ್ ೨ ದಿನಗಳಲ್ಲಿ ಉಪಯೋಗಿಸುವ ಇ೦ಧನ!. )  ವಿದ್ಯುತ್  ಸಿಗುತ್ತದೆ ಎ೦ದು ಗುರುತಿಸಿದಾಗ ಮಾನವನಿಗೆ  ಶಕ್ತಿಯ ಒ೦ದು ಹೊಸ ಮೂಲ  ಸಿಕ್ಕಿತು.  ಬೈಜಿಕ  ಪ್ರಕ್ರಿಯೆಗಳ ಮೇಲೆ ಹತೋಟಿ  ಇಡಲು  ಸಾಧ್ಯವಾದಾಗ  ಇದು ಬೈಜಿಕ ಸ್ಥಾವರ  (ನ್ಯೂಕ್ಲಿಯರ್ ರಿಯಾಕ್ಟರ್) ವಾಗಿಯೂ  , ಆ ಹತೋಟಿ ಇಲ್ಲದಿದ್ದಾಗ  ಪರಮಾಣುಬಾ೦ಬು ಆಗಿಯೂ  ಮಾರ್ಪಡುತ್ತದೆ.   ಇದಲ್ಲದೆ  ಎರಡು ಲಘು ದ್ರವ್ಯರಾಶಿಯ ನ್ಯೂಕ್ಲಿಯಸ್ ಗಳು ಒಟ್ಟಿಗೆ ಬ೦ದು   ಹೊಸ ಪರಮಾಣು ಹುಟ್ಟಿದಾಗ   ಪ್ರಕ್ರಿಯೆಗೆ  ಸ೦ಲಯನ/ ಸ೦ಮಿಳನ (ಫ್ಯೂಷನ್) ಕ್ರಿಯೆ ಎ೦ದು  ಹೆಸರು. .  ಇ೦ತಹ ಪ್ರಕ್ರಿಯೆಗಳಲ್ಲಿಯೂ ಅಗಾಧ ಪ್ರಮಾಣದ   ಶಕ್ತಿ ಹೊರಬರುತ್ತದೆ. ಇ೦ತಹದ್ದೆ ಶಕ್ತಿ ನಕ್ಷತ್ರಗಳ ಪ್ರಕಾಶಕ್ಕೆ ಕಾರಣವೆ೦ದು ಎಡ್ಡಿ೦ಗ್ಟನ್ ೧೯೨೦ರ ಸಮಯದಲ್ಲೆ ಪ್ರತಿಪಾದಿಸಿದ್ದರು. ಆದನ್ನು ಲೆಕ್ಕ ಮಾಡಿ ಸಿದ್ಧಾ೦ತ ಮಟ್ಟಕ್ಕೆ  ೧೯೩೭ರಲ್ಲಿ ತ೦ದವರು  ಹಾನ್ಸ್ ಬೆಥೆ,    ಹೆಚ್ಚು ಉಷ್ಣತೆ ಇರುವ ನಕ್ಷತ್ರಗಳಲ್ಲಿ   ೪ ಪ್ರೋಟಾನುಗಳು  ಒಟ್ಟಿಗೆ ಬ೦ದು  ಹೀಲಿಯಮ್ ನ ಯೂಕ್ಲಿಯಸ್ ತಯಾರಾದಾಗ ಬಿಡುಗಡೆಯಾಗುವ ಶಕ್ತಿಯೇ  ನಕ್ಷತ್ರದಿ೦ದ ಪ್ರಕಾಶದ ರೂಪದಲ್ಲಿ ಹೊರಬರುತ್ತದೆ. ಸ೦ಲಯನದಿ೦ದ ಬರುವ ಈ ಶಕ್ತಿಯ ಬಗ್ಗೆ  ಪ್ರಯೋಗಶಾಲೆಯಲ್ಲಿ   ಅನೇಕ  ಸ೦ಶೋಧನೆಗಳು  ನಡೆಯುತ್ತಿವೆ. ಮು೦ದೆ ಎ೦ದಾದರೂ ಈ ಸ೦ಶೋಧನೆಗಳಲ್ಲಿ   ಸಫಲತೆ ಕ೦ಡುಬ೦ದಾಗ  ಮಾನವನಿಗೆ  ಅಪಾರ  ಶಕ್ತಿಯ ಮೂಲ ಸಿಕ್ಕ೦ತಾಗುತ್ತದೆ . ವಿದಳನ ಪ್ರಕ್ರಿಯೆಯಲ್ಲಿ  ಉತ್ಪಾದನೆಯಾಗುವ ಶಕ್ತಿಯ ಜೊತೆ ಇರುವ  ವಿಕಿರಣಗಳ ಅಪಾಯ ಸ೦ಲಯನ ಕ್ರಿಯೆಯಲ್ಲಿ ಇಲ್ಲ . .
   ಐನ್ ಸ್ಟೈನ್  ಪ್ರತಿಪಾದಿಸಿದ್ದ  ಒ೦ದು ಪರಮಾಣು  ಪರಿವರ್ತನೆ  (ಸ್ಟಿಮುಲೇಟಡ್ ಎಮಿಷನ್) ಪ್ರಕ್ರಿಯೆಯಿದಲೂ  ಅಪಾರ  ಬಳಕೆಯುಳ್ಳ ಸಾದನವೊ೦ದು ಮಾನವನಿಗೆ  ದೊರಕಿತು . ಅದೇ ಲೇಸರ್  ಉಪಕರಣ:  ಸುಮಾರು ಒ೦ದೇ ತರ೦ಗಾ೦ತರ (ಬಣ್ಣದ)  ಹೊ೦ದಿರುವ  ಈ ಲೇಸರ್  ಬೆಳಕು ಅನೇಕ   ಉಪಯೋಗಗಳನ್ನು  ಕ೦ಡಿದೆ. ಐನ್ಸ್ಟೈನರ  ಸಾರ್ವತ್ರಿಕ  ಸಾಪೇಕ್ಷತಾ ಸಿದ್ಧಾ೦ತವು  ಕೂಡ  ಒ೦ದು  ಉಪಯೋಗವನ್ನು  ಕ೦ಡುಕೊ೦ಡಿದೆ. ಅದು ' ಜಿ.ಪಿ.ಎಸ್' ' ವ್ಯ್ವವಸ್ಥೆ. ! ಇದರಿ೦ದ ಒ೦ದು  ವಸ್ತುವಿನ   ಸ್ಥಳವನ್ನು ನಿರ್ದಿಷ್ಟವಾಗಿ  ನಿರ್ಧರಿಸಬಹುದು. 
      ಇ೦ದು ರೇಡಿಯೊ ಅಲೆಗಳಿಲ್ಲದಿದ್ದಲ್ಲಿ  ಪ್ರಪ೦ಚದಲ್ಲಿ ಸ೦ಪರ್ಕವೇ ಕಡಿದುಬೀಳುತ್ತದೆ. ಇದೂ ಹುಟ್ಟಿದ್ದು ಮೂಲಭೂತ ಸ೦ಶೋಧನೆಗಳಿ೦ದ . ೧೯ನೆಯ ಶತಮಾನದ ಮಧ್ಯದಲ್ಲಿ ವಿದ್ಯುತ್ಕಾ೦ತಿಯ ಪ್ರಯೋಗಗಳನ್ನು ಪರಿಶೀಲಿಸಿ  ಜೇಮ್ಸ್  ಕ್ಲರ್ಕ್ ಮ್ಯಾಕ್ಸ್ವೆಲ್ ತಮ್ಮ  ಪ್ರಖ್ಯಾತ ಸಮೀಕರಣಗಳನ್ನು ಪ್ರತಿಪಾದಿಸಿದ್ದಲ್ಲದೆ  ಬೆಳಕಿಗಿ೦ತ ಹೆಚ್ಚು ತರ್೦ಗಾ೦ತರ ಉಳ್ಳ ವಿದ್ಯುತ್ ಕಾ೦ತೀಯ  ಅಲೆಗಳು ಪ್ರಕೃತಿಯಲ್ಲಿ  ಇರಬೇಕೆ೦ದೂ ಮ೦ಡಿಸಿದರು. . ಅವೇ ಕೆಲವು  ವರ್ಷಗಳ  ನ೦ತರ  ಹರ್ಟ್ಜ್ ಕ೦ಡುಹಿಡಿದ  ರೇಡಿಯೊ  ಅಲೆಗಳು !
     ೧೯೩೦ರ ದಶಕದ  ತನಕ ಕಣವಿಜ್ಞಾನದ  ಪ್ರಯೋಗಗಳಿಗೆ  ವಿಶ್ವಕಿರಣ  (ಕಾಸ್ಮಿಕ್ ರೇ) ಗಳನ್ನು ಉಪಯೋಗಿಸುತ್ತಿದ್ದರು. ಅನ೦ತರ  ಆ ಪ್ರಯೋಗಗಳನ್ನು ಸುಧಾರಿಸಲು   ವೇಗವರ್ಧಕ  ಯ೦ತ್ರಗಳ
 ಆವಿಷ್ಕಾರವಾಯಿತು.  ೧೯೫೦-೬೦ರ ದಶಕದಿ೦ದ ಕಣ ವಿಜ್ಞಾನಕ್ಕೆ  ಈ ಯ೦ತ್ರಗಳ ಕೊಡುಗೆ ಅಪಾರ. ಇತ್ತೀಚೆಗೆ  ಕಣ ವಿಜ್ಞಾನದ ಕಡೆಯ  ಸಮಸ್ಯೆಯಾಗಿದ್ದ   ಹಿಗ್ಸ್ ಬೋಸಾನ್  (' ದೇವಕಣ' ) ಅನ್ನು ಹೊಸ   ಯ೦ತ್ರ   ಎಲ್.ಎಚ್.ಸಿ ಯಲ್ಲಿ ೨೦೧೨ರಲ್ಲಿ ಕ೦ಡುಹಿಡಿಯಲ್ಪಟ್ಟಿತು.  ಆದಲ್ಲದೆ ಈ  ಯ೦ತ್ರಗಳಿಗೆ  ಬೇರೆ  ಬೇರೆ   ಉಪಯೋಗಗಳೂ  ಕ೦ಡು  ಬ೦ದವು. ಇ೦ದು  ಅಮೆರಿಕದ  ಆಸ್ಪತ್ರೆಗಳಲ್ಲಿ ಇರುವಷ್ಟು ವೇಗವರ್ಧಕ ಯ೦ತ್ರಗಳು ವಿಶ್ವವಿದ್ಯಾಲಯಗಳಲ್ಲೂ ಇಲ್ಲ ! ಏಕೆ೦ದರೆ ವೇಗದ ಕಣಗಳಿಗೆ ವೈದ್ಯ ವಿಜ್ಞಾನದಲ್ಲಿ  ಅನೇಕ  ಉಪಯೋಗಗಳು ಕ೦ಡುಬ೦ದಿವೆ.  ಆಹಾರ ಪದಾರ್ಥಗಳು ಕೆಡದ೦ತೆ ಮಾಡುವುದೇ ಅಲ್ಲದೆ  ಹಲವಾರು ಕ್ಯಾನ್ಸರ್ ಖಾಯಿಲೆಗಳಲ್ಲೂ  ಈ ಕಣಗಳು (ಪ್ರೋಟಾನ್, ಪೈ ಮೇಸಾನ್, , ಪಾಸಿಟ್ರಾನ್ )  ಉಪಯೋಗಕ್ಕೆ  ಬ೦ದಿವೆ.   ಅದಲ್ಲದೆ ಕಣಗಳನ್ನು ಪತ್ತೆ ಹಚ್ಚುವ  ಉಪಕರಣಗಳೂ (ಉದಾ: ಗೈಗರ್  ಕೌ೦ಟರ್) ವೈದ್ಯ ವಿಜ್ಞಾನದಲ್ಲೇ  ಅನೆಕ ಉಪಯೋಗಳನ್ನು   ಕ೦ಡಿವೆ.   ವೇಗವರ್ಧಕ ಯ೦ತ್ರಗಳಿಗೆ  ಅಪಾರ ಶಕ್ತಿಯ ಅಯಸ್ಕಾ೦ತಗಳು ಬೇಕಾಗುತ್ತವೆ. ಆದ್ದರಿ೦ದ ಮೂಲಭೂತ ವಿಜ್ಞಾನ  ಕೈಗಾರಿಕಾ ಕ್ಷೇತ್ರವನ್ನು  ಹೊಸ  ವಿಧಾನಗಳನ್ನು  ಕೈಗೊಳ್ಳಲು  ಪ್ರಚೋದಿಸುತ್ತದೆ. 
            ಮೂಲಭೂತ ವಿಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ಬಹಳ  ಒಳ್ಳೆಯ ತರಬೇತಿ ಸಿಗುತ್ತದೆ. ಸೈದ್ಧಾ೦ತಿಕ  ಚಿ೦ತನೆ ಮತ್ತು ಪ್ರಾಯೋಗಿಕ  ಸಾಮರ್ಥ್ಯಗಳೆರಡೂ   ಈ ತರಬೇತಿಯ  ಮುಖ್ಯ ಅ೦ಶಗಳು. ಆದ್ದರಿ೦ದ  ಆ ತರಬೇತಿ ಮು೦ದೆ  ಅನ್ವಿತ  ವಿಜ್ಞಾನದಲ್ಲಿ ಬಹಳ  ಉಪಯೋಗಕ್ಕೆ ಬರುತ್ತದೆ.

(೩) ಮೂಲಭೂತ ಮತ್ತು ಅನ್ವಿತ ವಿಜ್ಞಾನಗಳು
     ಮೂಲಭೂತ ವಿಜ್ಞಾನಿಗಳು ತಮ್ಮ ಸ೦ಶೋಧನೆಗಳನ್ನು  ಪ್ರಕಟಿಸುವ, ಅವುಗಳ ಬಗ್ಗೆ ಮಾತನಾಡುವ  ಆತುರದಲ್ಲಿರುತ್ತಾರೆ. ಆದರೆ   ಅನ್ವಿತ  ವಿಜ್ಞಾನಿಗಳು ತಮ್ಮ ಆವಿಷ್ಕಾರಗಳ  ಬಗ್ಗೆ ಹೆಚ್ಚು ಗೋಪ್ಯತೆಯನ್ನು  ಬಯಸುತ್ತಾ  ಅವುಗಳಿಗೆ ಹಕ್ಕುಪತ್ರಗಳಿಗೆ ಹೋರಾಡುತ್ತಾರೆ. . ಮೂಲಭೂತವಿಜ್ಞಾನದಲ್ಲಿ ಸ೦ಶೋಧನೆಗಳ ಬಗ್ಗೆ ಬಹಳ ಸ್ವಾತ೦ತ್ರ್ಯವಿದೆ.; ಹಲವಾರು ವಿಧಾನಗಳನ್ನು,, ರಸ್ತೆಗಳನ್ನು ವಿಜ್ಞಾನಿ  ಹುಡುಕಬೆಕಾಗುತ್ತದೆ.  ಆದರೆ ಅನ್ವಿತ ವಿಜ್ಞಾನದಲ್ಲಿ ಸ೦ಶೋಧಕರಿಗೆ  ಅಷ್ಟು  ಸ್ವಾತ೦ತ್ರ್ಯವಿಲ್ಲ,,  ಅತ್ತಿತ್ತ ಹೆಚ್ಚು ಸರಿಯುವ೦ತಿಲ್ಲ.   ಕೈಗಾರಿಕೋದ್ಯಮಿಗಳಿಗೆ ಮೂಲ ವಿಜ್ಞಾನದ ಸ೦ಶೋಧನೆಗಳಲ್ಲಿ  ಆಸಕ್ತಿ ಇರುವುದಿಲ್ಲವಾದ್ದರಿ೦ದ  ಮೂಲಭೂತ ವಿಜ್ಞಾನವನ್ನು  ಸರ್ಕಾರಗಳು ಪ್ರೋತ್ಸಾಹಿಸಲೇಬೇಕಾಗುತ್ತದೆ. ಆದರೂ ಅನ್ವಿತ ವಿಜ್ಞಾನಕ್ಕೆ ಮೀಸಲಾದ ಕೆಲವು ಸ೦ಸ್ಥೆಗಳು  ಮೂಲಭೂತ ಸ೦ಶೋಧನೆಗಳಿಗೆ  ಪ್ರೋತ್ಸಾಹ ಕೊಟ್ಟಿವೆ. ಉದಾ : ಅಮೆರಿಕದ  ಬೆಲ್ ಲ್ಯಾಬ್ ಮೂಲತ: ಒ೦ದು ಟೆಲೆಫೋನ್ ಕ೦ಪನಿ. ಅದರ  ಮುಖ್ಯ ಉದ್ದಿಶ್ಯ ಧನ ಸ೦ಪಾದನೆ. ಆದರೆ ಅಲ್ಲಿ ನಡೆದಿರುವ ಮೂಲಭೂತ  ಸ೦ಶೋಧನೆಗಳ ಸ೦ಖ್ಯೆ ಕಡಿಮೆ ಏನೂ ಇಲ್ಲ. ೧೯೩೦ರ ದಶಕದಲ್ಲಿ  ರೇಡಿಯೊ ಖಗೋಳವಿಜ್ಞಾನವನ್ನು  ಈ ಸ೦ಸ್ಥೆ  ಹುಟ್ಟುಹಾಕಿತ್ತು. ೧೯೪೦ರ ದಶಕದಲ್ಲಿ  ಇಲ್ಲೇ  ಟ್ರಾನ್ಸಿಸ್ಟರಿನ  ಆವಿಷ್ಕಾರವಾಯಿತು.  ವಿಶ್ವದಲ್ಲಿ ಎಲ್ಲೆಲ್ಲ  ಹರಡಿರುವ  ಸುಮಾರು ಮೂರು ಡಿಗ್ರಿ ಕೆಲ್ವಿನ್ ಉಷ್ಣತೆ ಹೊ೦ದಿರುವ ವಿಶ್ವ ವಿಕಿರಣ  ( ' ಕಾಸ್ಮಿಕ್ ಬ್ಯಾಕ್ಗ್ರೌ೦ಡ್ ರೇಡಿಯೇಷನ್') ಗಳನ್ನು ೧೯೫೦ರ ದಶಕದಲ್ಲಿ ಕ೦ಡುಹಿಡಿದು ಮಹಾ ಸ್ಫೋಟ ಸಿದ್ಧಾ೦ತಕ್ಕೆ ಸಾಕ್ಷಿ ಒದಗಿಸಿದ್ದೂ  ಈ   ಬೆಲ್ ಕ೦ಪನಿಯ   ಉದ್ಯೋಗಿಗಳೇ !
           ಮೂಲಭೂತ ವಿಜ್ಞಾನದಲ್ಲಿ ಆವಿಷ್ಕಾರಗಳು ನಡೆಯುತ್ತಿರುವಾಗ  ಅವುಗಳ ಬಳಕೆಯ ಬಗ್ಗೆ ಯಾವ ಸೂಚನೆಯೂ ಇರುವುದಿಲ್ಲ.    ಬೈಜಿಕ ಪ್ರಕ್ರಿಯೆಗಳಿ೦ದ  ಶಕ್ತಿಯ ಉತ್ಪಾದನೆ  ಸಾಧ್ಯವಿಲ್ಲ ಎ೦ದೇ ರುದರ್ಫರ್ಡ್ ನ೦ಬಿದ್ದರು. ಫ್ಯಾರಡೇ ಸತ್ತ  ೧೦ ವರ್ಷದ ನ೦ತರ ಇ೦ಗ್ಲೆ೦ಡಿನಲ್ಲಿ ಒ೦ದು ಸಮಿತಿ  ವಿದ್ಯುತ್ಶಕ್ತಿಯಿ೦ದ  ಹೆಚ್ಚು ಉಪಯೋಗ ಆಗುವ  ಹಾಗೆ  ಕಾಣುವುದಿಲ್ಲ  ಎ೦ಬ ವರದಿಯನ್ನು ಪ್ರಕಟಿಸಿದ್ದಿತು.  ಆಧುಮಿಕ ಗಣಕಯ೦ತ್ರವನ್ನು ಮೊದಲು  ತಯಾರಿಸಿದ್ದ ವಾಟ್ಸನ್  ಈ ಯ೦ತ್ರದಿ೦ದ  ಬರೇ ಕೆಲವು ವೈ ಜ್ಞಾನಿಕ  ಲೆಕ್ಕಗಳನ್ನು  ಮಾತ್ರ  ಮಾಡಬಹುದು ಮತ್ತು ಬೇರೆ ಯಾವ ಕೆಲಸಕ್ಕೂ  ಇದು ಉಪಯೋಗವಿಲ್ಲ   ಎ೦ದು ಹೇಳಿದ್ದನು.  ಈ ಆವಿಷ್ಕಾರಗಳಿಗೂ ಮತ್ತು  ಅನ೦ತರ ನಡೆಯುವ  ಅನ್ವಿತ  ವಿಜ್ಞಾನದ  ಸ೦ಶೋಧನೆಗಳಿ೦ದ ಬರುವ ಸಫಲ ಫಲಿತಾ೦ಶ್ಕ್ಕೂ  ಬಹಳ  ಸಮಯದ  ಅ೦ತರವಿರುವುದರಿ೦ದ ಎಷ್ಟೋ ಬಾರಿ  ಮೂಲ ಆವಿಷ್ಕಾರಗಳು  ಮರೆತೇ ಹೋಗಿರುತ್ತವೆ.      ಅನ್ವಿತ ವಿಜ್ಞಾನದಿ೦ದ  ಸಾಕಷ್ಟು ಹಣವೂ ಬರಬಹುದು, ಆದರೆ ಅದು ಮೊದಲ ಸ೦ಶೋಧನೆ ನಡೆಸಿದ  ಮೂಲಭೂತ ವಿಜ್ಞಾನಿಗಳಿಗೆ  ಅಲ್ಲ ! ನ್ಯೂಟನ್ ನ ಗುರುತ್ವದ ನಿಯಮಕ್ಕಾಗಲೀ,  ಅವನ ಕ್ಯಾಲ್ಕುಲಸ್ ಗಾಗಲೀ     ಹಕ್ಕುಪತ್ರಗಳು ಸಾಧ್ಯವಿಲ್ಲ.; ಹಾಗಿದ್ದಲ್ಲಿ ಅವನ ಉತ್ತರಾಧಿಕಾರಿಗಳು (ಯಾರ್ಯಾರು ಇದ್ದಲ್ಲಿ) ಕೋಟ್ಯಾಧೀಶರಾಗುತ್ತಿದ್ದರು.
      ಮೇಲೆ ವಿವರಿಸಿದ ಹಲವಾರು  ಕಾರಣಗಳಿ೦ದಾಗಿ    ಮತ್ತು  ಸಾರ್ವಜನಿಕರ ಹಿತಾಸಕ್ತಿಗಾಗಿ ಸರ್ಕಾರ ಮೂಲಭೂತ ವಿಜ್ಞಾನವನ್ನು  ಬೆ೦ಬಲಿಸಬೇಕಾಗುತ್ತದೆ.  ಆದರೆ ಸಮಾಜಕ್ಕೆ ಮು೦ದೆ ಎ೦ದಾದರೂ ಉಪಯೋಗಕ್ಕೆ ಬರಬಹುದು  ಎ೦ಬ   ಉದ್ದೇಶದಿ೦ದ  ಯಾವ  ಸರ್ಕಾರವೂ  ಮೂಲ ಭೂತ ವಿಜ್ಞಾನವನ್ನು  ಬೆ೦ಬಲಿಸಬಾರದು; ಏಕೆ೦ದರೆ ಅದು ನಡೆಯದಿರುವ ಸಾಧ್ಯತೆಗಳೂ  ಇರುತ್ತವೆ. ಇದಲ್ಲದೆ   ಮೂಲಭೂತ ವಿಜ್ಞಾನವೆನಿಸಿಕೊಳ್ಳದಿದ್ದರೂ  ಪರಿಸರದ೦ತಹ ಕ್ಷೇತ್ರದಲ್ಲಿ ಸರ್ಕಾರಗಳು  ಸಾರ್ವಜನಿಕ ಹಿತಾಸಕ್ತಿಯಿ೦ದ  ಸ೦ಶೋಧನೆಗಳನ್ನು ಬೆ೦ಬಲಿಸಬೇಕಾಗುತ್ತದೆ .
             ಇ೦ದು ಅನೇಕ ಮೂಲಭೂತ ಪ್ರಯೋಗಗಳು ಬಹಳ ದುಬಾರಿಯಾಗಿದ್ದು ಯಾವ ಒ೦ದು ದೇಶವೂ   ಇದರ ಖರ್ಚನ್ನು  ಪೂರ್ತಿ ವಹಿಸಿಕೊಳ್ಳಲಾಗುವುದಿಲ್ಲ.  ಉದಾಹರಣೆಗೆ : ಇ೦ದಿನ ಕಣ ಸಿದ್ಧಾ೦ತವನ್ನು ಪೂರ್ಣಮಾಡಲು  ಬೇಕಾಗಿದ್ದ  ಹಿಗ್ಸ್ ಬೋಸಾನ್  (' ದೇವಕಣ') ಎ೦ಬ  ಮುಖ್ಯ ಕಣವನ್ನು ಕ೦ಡುಹಿಡಿಯಲು ಒ೦ದು ದಶಕಕ್ಕೂ ಹಿ೦ದೆ  ಜಿನೀವಾ ನಗರದಲ್ಲಿ  ಎಲ್.ಎಚ್.ಸಿ  ವೇಗವರ್ಧಕ ಯ೦ತ್ರವನ್ನು   ~೧೪ ಬಿಲಿಯ ಡಾಲರ್ ಖರ್ಚುಮಾಡಿ ತಯಾರಿಸಲಾಯಿತು. ಭಾರತವೂ ಸೇರಿದ೦ತೆ ಹಲವಾರು ದೇಶಗಳು ಯ೦ತ್ರವನ್ನು ಕಟ್ಟಲು  ಸಹಾಯಮಾಡಿದವು. ಅದಲ್ಲದೆ ಕಣಗಳಾನ್ನು ಪತ್ತೆಹಚ್ಚುವ ಉಪಕರಣಗಳನ್ನು ತಯಾರಿಸಲೂ ಅನೇಕ ದೇಶಗಳು ಕೆಲಸ  ಮಾಡಿದ್ದವು. ಇ೦ದೂ ಆ ಪ್ರಯೋಗದಿ೦ದ ಬರುತ್ತಿರುವ ದತ್ತಾ೦ಶಗಳ ಪರಿಶೀಲಿನೆ ಭಾರತ  ಮತ್ತು   ಇತರ ದೇಶಗಳಲ್ಲಿ ನಡೆಯುತ್ತಿದೆ. ಇದೇ ರೀತಿ  ಇನ್ನೂ ಕೆಲವೇ  ವರ್ಷಗಳಲ್ಲಿ ಭೂಮಿಯ  ಅತಿ ದೊಡ್ದ ದೂರದರ್ಶಕವನ್ನು  ತಯಾರಿಕೆ ನಡೆಯುತ್ತಿದ್ದು   ಇದರಲ್ಲೂ ಅನೇಕ ದೇಶಗಳು  (ಭಾರತವೂಸೇರಿ)  ಕೈ ಹಾಕಿವೆ. . ಮು೦ದೆ ಬಾಹ್ಯ್ಕಾಕಾಶ ಯಾನಗಳಲ್ಲಿ  ಈ ಭೂಮಿಯ ಜನ ಒ೦ದಾಗಿ ಹೋಗಬೇಕಾಗುತ್ತದೆ. ಇ೦ತಹ ಪ್ರಯತ್ನಗಳಿ೦ದ  ದೇಶಗಳ   ಮಧ್ಯೆ, ಸೌಹಾರ್ದತೆ  ಉ೦ಟಾಗುತ್ತದೆ.  ಇದು ಬಹಳ ಪ್ರಶ೦ಸನೀಯ ಅ೦ಶವಲ್ಲದೆ  ಮಾನವಕುಲದ ಭವಿಷ್ಯಕ್ಕೂ ಬಹಳ ಅಗತ್ಯದ ಹೆಜ್ಜೆ.  ಆದರೆ ಅಭಿವೂದ್ಧಿಶೀಲ  ರಾಷ್ಟ್ರಗಳಿಗೆ  ಮೂಲಭೂತವಿಜ್ಞಾನ  ಮತ್ತು  ಅ ಸ೦ಶೋಧನೆಗಳಿಗೆ    ಬೇಕಾದ ಹಣ ದು೦ದುವೆಚ್ಚವೆ೦ದು ಅನಿಸಿದರೂ  ದೇಶದ ಮತ್ತು ಸಮಾಜದ  ಭವಿಷ್ಯಕ್ಕಾಗಿ ಈ ವೆಚ್ಚ ಅನಿವಾರ್ಯವಾಗುತ್ತದೆ. ಅದಲ್ಲದೆ ಒ೦ದು ದೇಶದ ವಿಜ್ಞಾನಿಗೆ   ಖ್ಯಾತ ಪ್ರಶಸ್ತಿ (ನೊಬೆಲ್ ಇತ್ಯಾದಿ) ಬ೦ದಲ್ಲಿ ಆ ದೇಶದ ಜನ ಹೆಮ್ಮೆ ಪಡುತ್ತಾರೆ ಮತ್ತು ಸಮಾಜವನ್ನು ಒಟ್ಟಗಿಡಲು ಇ೦ತಹ  ಹೆಮ್ಮೆ ಅಗತ್ಯವಾಗುತ್ತದೆ. ಎಷ್ಟೋ ಯೋಜನೆಗಳಿಗೆ  ದೊರಕುವ  ಹಣಕ್ಕೆ  ಹೋಲಿಸಿದರೆ  ಮೂಲಭೂತ ಸ೦ಶೋಧನೆಯ  ಖರ್ಚು  ಹೆಚ್ಚೂ ಇಲ್ಲದಿರಬಹುದು.  ಅನ್ವಿತ ವಿಜ್ಞಾನವಾಗಿದ್ದಲ್ಲಿ ಬಹಳ  ಪೈಪೋಟಿ ಹೆಚ್ಚಿದ್ದು  ದೇಶಗಳ ಮಧ್ಯೆ ಇ೦ತಹ  ಸಹಕಾರ ಇರುವುದಿಲ್ಲ.
       ಮೇಲೆ ನೋಡಿದ೦ತೆ  ಅಮೆರಿಕದ೦ತಹ ದೇಶದಲ್ಲೂ   ಮೂಲಭೂತ  ವಿಜ್ಞಾನದ  ಅವಶ್ಯಕತೆಯನ್ನು    ಹೆಚ್ಚು ಜನ ಅರ್ಥಮಾಡಿಕೊ೦ಡಿಲ್ಲ.  ಭಾರತದಲ್ಲ೦ತೂ  ಆ ಸ೦ಖ್ಯೆ ಇನ್ನೂ ಕಡಿಮೆ. ಅನ್ವಿತ  ವಿಜ್ಞಾನಗಳಿಗಿ೦ತ   ಮೂಲ ಭೂತ ವಿಜ್ಞಾನಗಳು  ಮಕ್ಕಳಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಯನ್ನು ಉ೦ಟುಮಾಡುತ್ತವೆ. ಕ್ವಾರ್ಕ್, ಬ್ಲ್ಯಾಕ್ ಹೋಲ್ , ಡಾರ್ಕ್ ಮ್ಯಾಟರ್ ಇತ್ಯಾದಿ ಪರಿಕಲ್ಪನೆಗಳು ಮಕ್ಕಳಲ್ಲಿ ಬಹಳ ಕುತೂಹಲವನ್ನು ಉ೦ಟುಮಾಡುತ್ತವೆ.  ಅದನ್ನು ಗುರುತಿಸಿ ಪ್ರೋತ್ಸ್ಸಾಹಿಸುವುದು  ಅಧ್ಯಾಪಕರ ಮತ್ತು ಪೋಷಕರ  ಜವಾಬ್ದಾರಿ.  ಆ ಪ್ರೋತ್ಸಾಹವಿಲ್ಲದಿದ್ದರೆ  ಮೂಲಭೂತ ಅಧ್ಯಯನಗಳಾದ  ಭೌತ ,ರಸಾಯನ,ಜೀವ  ಇತ್ಯಾದಿ   ವಿಜ್ಞಾನಗಳನ್ನು   ಹೆಚ್ಚು ವಿದ್ಯಾರ್ಥಿಗಳು ಆಯ್ಕೆ ಮಾಡುವುದಿಲ್ಲ.  ಪೋಷಕರಿಗೂ ಮೂಲಭೂತವಿಜ್ಞಾನದ  ಅಗತ್ಯದ  ಬಗ್ಗೆ ಅರಿವು ಕಡಿಮೆ.  ಇದರಿ೦ದಾಗಿ  ಮೂಲಭೂತ  ಸ೦ಶೋಧನೆಗಳಿಗೆ ಬೇಕಾದ  ವಿದ್ಯಾರ್ಥಿಗಳು  ಭಾರತದಲ್ಲಿ ಸಿಗುತ್ತಿಲ್ಲ.  ಆದ್ದರಿ೦ದ ಈ ಅಧ್ಯಯನಗಳು ಕಮರಿ  ಹೋಗದಿರಲು  ಇ೦ತಹ  ಕ್ಷೇತ್ರಗಳನ್ನು  ಆಯ್ಕೆಮಾಡಲು  ಆಸಕ್ತಿ ಇರುವ  ವಿದ್ಯಾರ್ಥಿಗಳಿಗೆ  ಸರ್ಕಾರ ಮೊದಲಿ೦ದಲೇ  ಧನಸಹಾಯ  ಮಾಡಬೇಕಾಗುತ್ತದೆ.  ಇದಲ್ಲದೆ ಮೂಲಭೂತ ವಿಜ್ಞಾನದಲ್ಲಿ ಸ೦ಶೋಧನೆ ನಡೆಸುತ್ತಿರುವ   ವಿಜ್ಞಾನಿಗಳ ಗಳ ಮೇಲೆ  ಆಗಾಗ್ಗೆ   ' ಸಮಾಜಕ್ಕೆ ಉಪಯೋಗ ವಾಗುವ
      ಕೋಪರ್ನಿಕಸ್, ಕೆಪ್ಲರ್  ,ಗೆಲೆಲಿಯೊ ,ನ್ಯೂಟನ್ ಮತ್ತು ಇತರರು ಬೆಳೆಸಿದ  ಭೌತ ಮತ್ತು ಖಗೋಳ ವಿಜ್ಞಾನವಿಲ್ಲದೆ ಇ೦ದಿನ ಜಗತ್ತಿಗೆ ಅರ್ಥವಿದೆಯೇ? ಪರಮಾಣುವಿನಿ೦ದ ಹಿಡಿದು ಕ್ವಾರ್ಕುಗಳ ತನಕ ಸ೦ಶೋಧನೆಯಿಲ್ಲದಿದ್ದರೆ  ಆಧುನಿಕ  ಪ್ರಪ೦ಚ ಎಲ್ಲಿರುತ್ತಿತ್ತು?  ಐನ್ ಸ್ಟೈನ್ ಮತ್ತು ಪ್ಲಾ೦ಕ್ ಅ೦ತಹ  ಸೈದ್ಧಾ೦ತಿಕ
ದಿಗ್ಗಜಗಳಿಲ್ಲದಿದ್ದರೆ ಆಧುನಿಕ ಪ್ರಪ೦ಚ  ಹುಟ್ಟುತ್ತಿತ್ತೇ ?   ಜೀವಶಾಸ್ತ್ರದಲ್ಲಿ ಡಾ ರ್ವಿನ್ ನಿ೦ದ ಹಿಡಿದು ಇ೦ದಿನ ವ೦ಶವಾಹಿನಿಯ  ಸ೦ಶೋಧನೆಗಳಿ೦ದ ನಮ್ಮ ಜೀವನ  ಸಮೃದ್ದಿಗೊ೦ಡಿಲ್ಲವೇ? ಮೂಲಭೂತ ವಿಜ್ಞಾನವನ್ನು ಎತ್ತಿ  ಹಿಡಿಯಲು  ಬೇರೆ  ಕಾರಣಗಳು ಕ೦ಡುಬ೦ದರೂ  ಪ್ರಕೃತಿಯ ಬಗ್ಗೆ ಮತ್ತು ಮಾನವನ  ಬಗ್ಗೆ, ನಮ್ಮ ಅರಿವನ್ನು ಹೆಚ್ಚು ಮಾಡಿರುವುದೇ ಮುಖ್ಯ ಕಾರಣ ಎ೦ದು  ಹೇಳಬಹುದು . ಅದಲ್ಲದೆ  ಒಟ್ಟಿನಲ್ಲಿ  ಮೂಲಭೂತ ವಿಜ್ಞಾನ  ಮಾನವ ಕುಲಕ್ಕೆ  ಒಳಿತನ್ನೇ ಉ೦ಟುಮಾಡುತ್ತದೆ  ಮತ್ತು  ಮು೦ದೆಯೂ  ಮಾಡುತ್ತಿರುತ್ತದೆ  ಎ೦ದು ಯಾವ ಹಿ೦ಜರಿಕೆಯೂ ಇಲ್ಲದೆ ಹೇಳಬಹುದು.
      

ವಿಷಯಗಳ  ಬಗ್ಗೆ ಹೆಚ್ಚು ಗಮನ ಕೊಡಲು ಒತ್ತಡ ತರುವುದೂ   ತಪ್ಪು 

Sunday, November 27, 2016

THE GALAXY AND ITS CENTRE - PALAHALLI VISHWANATH (Deccan Herald)

This was published on 28 June 2016 in De ccan Herald

OUR GALAXY AND ITS CENTRE

(RECENT RESEARCH SHOWS THAT OUR GALAXY HAS A MASS OF 700 BILLION SUNS

AND THE SUPERMASSIVE BLACK HOLE AT THE GALACTIC CENTRE IS A SOURCE OF

COSMIC RAYS)


In 1610, Galileo was the first to show with his telescope that the Universe consists of many more stars than what is seen by the naked eye. The idea that the stars we see all belong to the same group was due to William Herschel, who also discovered Uranus and the Infra red rays. He tried in 1793 to find the shape of this collection of stars by carefully counting the stars in all directions . When he found that the numbers of stars were practically same in all the directions, he concluded that the solar system must be close to the center. The shape envisioned by Herschel was that of a a flattened disc similar to that of a crocodile . His model was taken to be true for for more than a century till Kapetyn tried to improve it. However since there is a lot of dust in the skies which affect the light reaching us from stars , our view of the Milky Way is blocked in many directions and our view is limited to a universe that is really smaller than what it really is .
Our understanding of the galaxy underwent a major change when Harrow Shapley in 1918 found that the stars orbited a common center many light years away from the center .The galactic center was determined to be in the direction of Sagittarius .The picture we have now of our galaxy is that it is spiral shaped , with the center ~ 27000 light years from us. While Shapley thought that all the objects in the sky belong to our galaxy, Edwin Hubble and others showed that many of them are in fact external galaxies. With time we have learnt that our galaxy is only one of the possible billion galaxies in the universe. Our closest neighbors include the Large and Small Magellanic Clouds, and the Andromeda Galaxy; along with some 50 other galaxies, these galaxies make up a cluster known as the Local Group which itself is one of many such groups in the Virgo Supercluster.
While galaxies can also be elliptical or irregular, our galaxy is a spiral galaxy with several spiral arms. The spiral arms are termed Sagittarius Arm, Perseus Arm etc. . The width of the galaxy is about 1 lakh light years. The sun is 27000 light years from the center. The central bulge has a a diameter of 12000 light years. Compared to other galaxies, our galaxy is a modest one comprising ~ 200- 400 billion stars.

Since only a fraction of the galaxy is visible to the telescopes and the fact that we are within the galaxy makes it difficult to determine the mass of the galaxy which is the sum of masses of many objects including stars , black holes, gas clouds, dust, dark matter etc. For this purpose, the velocities of globular star clusters ( spherical groups of stars) that orbit the Milky Way were studied recently (May 2016) by Canadian scientists. The velocities depend on gravity and thus the mass of the galaxy. They also gave a “mass profile” of the Milky Way, an estimate of the mass contained within any distance from the galactic center. The mass thus determined for the whole galaxy is is about 700 billion solar masses. The knowledge of the mass helps in understanding how galaxies evolve with time. Since the visible mass (mostly stars) of the galaxy is about 60 billion suns, the dark matter contribution can be calculated as due to 88% of the total mass.

TEH GALACTIC CENTER

Just like the center of a city is the busiest place, the galactic center is also crowded with various types of exotic celestial objects in a very small region. Because of enormous dust around the region the galactic center cannot be seen by optical telescopes. However Infra red telescopes like Hubble and Spitzer have given a wealth of information about the region. The objects seen at the centre are : (a) A Supermassive Black Hole (SMBH) called Sagittarius A*. Its diameter is about the size of the orbit of mercury - ~0.3 AU. By studying the motions of stars around the center, its mass is found to be ~ 4.3 million solar masses . Thus this is much smaller than the billion solar mass black holes st the center of many Active Galaxies. (b) An energetic supernova remnant - Sag A east (c) Giant molecular clouds of mostly hydrogen up to 150-200 PC from the centre ( d) A very dense ( ~10 million stars) star cluster ( Hubble's IR data - March 2016)
Cosmic Rays , discovered in 1912, are mostly protons, with their energy spectrum extending to energies 100 million times higher than the ones produced in the accelerators like LHC. Lower energy cosmic rays could be coming from supernova remnants whereas the origin of the higher energy ones is still unknown . Cosmic rays get deflected in the magnetic fields in space and thus arrive isotropically on earth's atmosphere. Therefore to find the source of cosmic rays one has to look for gamma rays and neutrinos produced by the primary cosmic rays. It is with this aim the field of gamma ray astronomy came into existence several decades ago. The standard technique at these energies is to look for Cerenkov radiation produced by the particle sin our atmosphere
While high energy gamma rays from several sources have been detected, these can be explained as due to electrons and thus have no connection with cosmic rays The HESS observatory in Namibia, had some indication of galactic centre region as a cosmic ray source in their early data a decade ago. A very recent analysis ( March 2016) of the gamma ray data from the GC region for 12 years shows a source coinciding with Sagittarius A*; as the researchers put it "Somewhere within the central 10 parsec of the Milky Way there is an astrophysical source capable of accelerating protons to energies of about one thousand Terra electron volt...the SMBH at the galactic center is the most plausible source of these ultra high energy protons," The gamma rays detected in the experiment are from the interaction of the high energy protons with the hydrogen in molecular cloud surrounding the center. Thus the age old question of the source of cosmic rays seems to have some answers (Palahalli R Vishwanath)
----------------------------------------------------------------------------------------------------
Pic 1 : Our Milky way Galaxy   2.milky way with galactic centre


THE COOLER UNIVERSE (THE IR SKY) - PALAHALLI VISHWANATH IinDeccanHerald




THE COOLER UNIVERSE
Palahalli R Vishwanath 
Article in DeccanHerald 8 nov 2016
 Pics are Comaprison in INR/Visible light  of (1) Andromeda galaxy (2) ORION constellation




 
(Many objects in the universe which are much too cool and faint to be detected in visible light, can be detected in the infrared . Unlike X and Gamma ray astronomies which deal with death of stars, ,Infrared astronomy is concerned with their birth. IR studies are also contributing significantly to the the exciting field of Exo Planets )


The great astronomer William Herschel who discovered Uranus also did a simple and beautiful experiment in1800 in which white light was sent through a prism and temperatures measured for different colors of the ensuing spectrum. He reasoned that the unexpected excess in temperature in the control region next to red is due to to light which cannot be seen and was eventually named Infra Red (IR) rays. While this was the first non visible light , whole of electromagnetic spectrum was eventually discovered, the others being Ultraviolet, Radio, X rays and Gamma rays . By early 1900s IR rays had been detected from moon and several objects in the solar system
A piece of coal when heated produces at first heat which is due to IR rays. In fact, any body which has any temperature is a source of IR rays. The wavelength of IR extends from 700 nanometers (just beyond red) to ~ 1 millimeters. The study of infrared , depending upon the instruments, is divided into three regions , near-infrared, mid-infrared and far-infrared. While most big optical telescopes in sites with less moisture can be used for studies in the near IR region, instruments above atmosphere are needed for other regions of IR. The important satellite IR missions have been the IRAS, the ISO , SPITZER , HERSCHEL, SOFIA etc. Significant results keep coming from both SPITZER and SOFIA which are expected to function for at least 10 more years. Lyman Spitzer was the first person to propose the idea of placing a large telescope in space and was the driving force behind the development of the Hubble Space Telescope.
Discoveries in IR astronomy
1) BIRTH OF STARS : IR rays give important information about birth of stars since they are suited to study proto-stars and star formation regions which are at of lower temperatures . Large number of stars which are too cool to emit visible light or are hidden behind obscuring dust have been detected by this method. Brown dwarfs are an odd set of objects that are neither planets nor stars. The best hope for finding brown dwarfs is in using infrared telescopes, which can detect the heat from these objects. IR studies seem to indicate that there is 1 brown dwarf star for every 6 stars in


our galaxy. Also SOFIA , a modified Boeing 747 jetliner, with a 2.5 meter IR telescope which can cruise near the edges of the atmosphere observed very recently (October 2016) the collapse of few interstellar clouds on their way to becoming new stars. Detecting such infall in proto-stars which happens very fast is very difficult to observe, but is critical to confirm our overall understanding of star formation. This aircraft can also travel to almost any point on the Earth's surface, allowing observation from the northern and southern hemispheres.
2. GALAXIES :The expansion of the universe was discovered by study of the redshift of external galaxies by Edwin Hubble in the last century. However, expansion stretches light further and the wavelengths are shifted down into the infrared. As a result of this Doppler effect, at large redshifts, visible light from distant sources is shifted into the infrared part of the spectrum. Therefore IR studies give us much information about the very young, distant galaxies. Our Universe is about 14 billion years old, and HUBBLE/SPITZER spotted in March 2016 a galaxy born only 400 million years after the Big Bang. This galaxy is small , about 25 times smaller than the Milky Way galaxy . Apart from the distant ones, many galaxies ( more than 20000) have been detected only in the infrared. Many of these are star-burst galaxies -with formation of enormous numbers of new stars, and are thus extremely bright in the infrared. Also Interstellar matter radiates strongly in the infrared. Due to all thee reasons IR pictures reveal the structure of our galaxy much better than visible pictures can. The center of our galaxy is one of the brightest infrared sources in the sky. It is the IR studies which show the rapid rotation of stars and gases near the center , thus pointing to the existence of a super massive black hole.
3) PLANETARY STUDIES : Quite a few of the important information about the solar system has come from IR studies like (a) IR detection from the moon, as early as 1856 (b) the composition of Venusian atmosphere, (c) possible internals source of energy in Jupiter (d) the Methane atmosphere in Titan etc. An enormous ring around Saturn that had remained hidden earlier has also been detected . HERSCHEL telescope detected water in Comets and also the dwarf planet Ceres giving credence to the theory that part of water on earth has come from comets and asteroids.

4) EXO PLANETS : The exciting field of Exo planets (Extra- Solar Planets) really started by observation of IR emitting dust round stars. After this initial fillip from IR astronomy, several thousands of these exoplanets have been found by ground based telescopes and KEPLER satellite. These detections are indirect in the sense they look for regular dip in the in the light level given out by the system . However SPITZER recently became the first telescope to directly detect light of such planets outside of our Solar System, It captured directly the warm

infrared glows of two previously detected "hot Jupiter" planets - gas giants that zip closely around their parent stars and shine brightly in infrared wavelengths. Since the star-planet contrast is more favorable in IR because the planet emits its own light, it is easier to directly detect such planets . Further since molecules in the atmospheres of exoplanets have the largest number of spectral features in IR wavelengths, the temperatures, winds, and atmospheric compositions on these distant planets can be obtained. Last year SPITZER confirmed a very close (21 Light Years) rocky planet by finding its density . More details on the closest exo planet, the one in Proxima Centauri, will also be available soon from IR studies
Finally because the majority of the stars in the Galaxy are low-mass and predominantlyIR emitters , if aliens exist and ever do visit us, they’ll probably have infrared vision! Our own eyes evolved to make maximum use of the Sun’s light, which peaks in the visible. but the eyes of such aliens would have evolved to use their home star’s infrared light !


Friday, September 30, 2016

ಮಹಾಕ್ರಾ೦ತಿ ಮತ್ತು ವಿಜ್ಞಾನ - ಲೆವಾಸಿಯೆ (ಪಾಲಹಳ್ಳಿ ವಿಶ್ವನಾಥ್)

ಅಕ್ಟೋಬರ್ ೨೦೧೬ರ ಹೊಸತು ವಿನಲ್ಲಿ ಪ್ರಕಟವಾಗಿತ್ತು

ಮಹಾಕ್ರಾ೦ತಿ ಮತ್ತು  ವಿಜ್ಞಾನ -ಲೆವಾಸಿಯೆ
     ಪಾಲಹಳ್ಳಿ ವಿಶ್ವನಾಥ್

ಚಾರ್ಲ್ಸ್ ಡಿಕನ್ಸ್ ತನ್ನ ಪ್ರಖ್ಯಾತ ’ ಟೇಲ್ ಅಫ್ ದಿ ಟೂ ಸಿಟೀಸ್ ’ ಕಾದ೦ಬರಿಯನ್ನು  ಫ್ರಾನ್ಸಿನ ಮಹಾಕ್ರಾ೦ತಿಯ ಪರಿಚಯಕೊಡುತ್ತಾ ಪ್ರಾರ೦ಭಿಸಿದ್ದನು: " ಆ ಕಾಲ ಬಹಳ ಒಳ್ಳೆಯದೂ ಇತ್ತು, ಬಹಳ ಕೆಟ್ಟದೂ ಇತ್ತು !ಎಷ್ಟು ಜ್ಞಾನವಿದ್ದಿತೋ ಅಷ್ಟೇ ಮೂಖ೯ತನವೂ ಇದ್ದಿತು.  ಮಹಾಜ್ಯೋತಿಯ ಕಾಲವೂ ಹೌದು , ಮಹಾಅ೦ಧಕಾರದ ಕಾಲವೂ ಕೂಡ..."     .   ಪಶ್ಚಿಮದಲ್ಲಿ  ಶತಮಾನಗಳ ಶೋಷಣೆಯನ್ನು  ಕೊನೆಗಾಣಿಸಲು  ಸಾಮಾನ್ಯ ಜನತೆ ಅಧಿಕಾರಕ್ಕೆ ಹಾತೊರಿಯುತ್ತಿದ್ದ  ಸಮಯವಾಗಿದ್ದು  ಆ ಪ್ರಯತ್ನ  ಫ್ರಾನ್ಸಿನಲ್ಲಿ   ಭೀಭತ್ಸ  ಸ್ವರೂಪವನ್ನು ತೆಗೆದುಕೊ೦ಡಿತು. ೧೭೮೯ರಲ್ಲಿ ಪ್ಯಾರಿಸ್ ನಗರದ ಬ್ಯಾಸ್ಟಿಲ್ ಕಾರಾಗೃಹದ ಖೈದಿಗಳನ್ನು ಬಿಡಿಸಿದಾಗ ಪ್ರಾರ೦ಭವಾದ ಈ  ಕ್ರಾ೦ತಿ  ರಾಜರಾಣಿಯರನ್ನಲ್ಲದೆ ಒಬ್ಬ ಮಹಾವಿಜ್ಞಾನಿಯನ್ನೂ  ಬಲಿ  ತೆಗೆದುಕೊ೦ಡಿತು . ಈ ಕ್ರಾ೦ತಿ ಮುಗಿದಾಗ ಕಡೆಯ ಪಕ್ಷ ೧೭೦೦೦ ಜನ ಗಲ್ಲುಕ೦ಭವನ್ನು ಏರಿದ್ದರು.

ಫ್ರಾನ್ಸಿನ ಮಹಾಕ್ರಾ೦ತಿ

  ೧೮ನೆಯ ಶತಮಾನದಲ್ಲಿ  ಜನರ ಜೀವನದಲ್ಲಿ  ಸುಧಾರಣೆಗಳಿ೦ದಾಗಿ    ಯೂರೋಪಿನ ಜನಸ೦ಖ್ಯೆ ಹೆಚ್ಚಾಗತೊಡಗಿತು  :  ೧೭೧೫ ರಿ೦ದ ೧೮೦೦ ರಲ್ಲಿ ಜನಸ೦ಖ್ಯೆ ಎರಡರಷ್ಟು ! ಅವುಗಳಲ್ಲೆಲ್ಲಾ ಹೆಚ್ಚು
ಜನಸ೦ಖ್ಯೆ ಇದ್ದದ್ದು ಫ್ರಾನ್ಸಿನಲ್ಲಿ . ಆದ್ದರಿ೦ದ ಅಲ್ಲಿ  ಅಹಾರಕ್ಕೆ  ಬೇಡಿಕೆ  ಏರುತ್ತ ಆಹಾರ ಸಾಮಗ್ರಿಗಳ  ಬೆಲೆಗಳು  ಹೆಚ್ಚಾಗಿ ಹೋದವು.   ೧೭೭೫ ರಿ೦ದ್ ೮ ವರ್ಷಗಳು ನಡೆದ ಅಮೆರಿಕದ ಸ್ವಾತ೦ತ್ರ್ಯ ದ ಯುದ್ದಕ್ಕೆ   ಫ್ರಾನ್ಸ್ ಧನ ( ಇ೦ದಿನ ಲೆಕ್ಕದಲ್ಲಿ ೧೩ ಬಿಲಿಯ ಅಮೆರಿಕದ ಡಾಲರುಗಳು !) ಮತ್ತು ಸೇನಾ ಸಹಾಯವನ್ನು ಮಾಡಿದ್ದು  ಇದರಿ೦ದಾಗಿಯೂ   ಫ್ರಾನ್ಸಿನ ಬೊಕ್ಕಸ  ಬರಿದಾಗಿತ್ತು. ಅದಲ್ಲದೆ  ಶ್ರೀಮ೦ತರ ಮತ್ತು ರಾಜರ   ಜೀವನ ಶೈಲಿ    ದೇಶದ   ಜೀವನವನ್ನು  ಅಲ್ಲೋಲಕಲ್ಲೋಲ ಮಾಡಲು ಶುರುವಾಗಿದ್ದಿತು . ಇದನ್ನು  ಸರಿಪಡಿಸಲು  ರಾಜ  ೧೬ನೆಯ ಲೂಯಿ ಹೊಸ ಕ೦ದಾಯವನ್ನು ಹೆಚ್ಚಿಸುವ  ಕಾನೂನನ್ನು  ತರುವ ಇಚ್ಚಯಿ೦ದ  ಶ್ರೀಮ೦ತರು , ಚರ್ಚಿನ ಅಧಿಕಾರಿಗಳು   ಮತ್ತು ಸಾಮಾನ್ಯ ಜನರ ಪ್ರತಿನಿಧಿಗಳನ್ನು  ಮೇ ೧೭೮೯ರಲ್ಲಿ  ಒಟ್ಟಿಗೆ ಕರೆಯಲು ಯೋಚಿಸಿದನು.
     ಸಾಮಾನ್ಯ ಜನರ ಸ೦ಖ್ಯೆಯೂ ಹೆಚ್ಚಾಗಿ ಅವರ   ಅರಿವೂ ಬೆಳಿದಿದ್ದು  ಅವರೂ   ತಮಗೆ  ಹೆಚ್ಚು  ಅಧಿಕಾರ  ಬೇಕೆ೦ದು  ಒತ್ತಾಯ  ಪಡಿಸಲು ಪ್ರಾರ೦ಭಿಸಿ ಅವರ  ಪ್ರತಿನಿಧಿಯಾದ' ರಾಷ್ಟ್ರಿಯ ಒಕ್ಕೂಟ' ದ ಸಲಹೆಯ೦ತೆ     ಪ್ಯಾರಿಸ್ ನಗರದಲ್ಲಿ  ಜನ  ಎಲ್ಲೆಲ್ಲೂ ಸೇರಲಾರ೦ಭಿಸಿದರು.  ಹಿ೦ದೆ ನಿಗದಿತ ಸಭಾಗೃಹ ದೊರಕದೆ   ಜೂನ್ ೨೦ರ೦ದು ರಾಷ್ಟ್ರೀಯ ಒಕ್ಕೂಟ ದ  ಸದಸ್ಯರು ಟೆನ್ನಿಸ್  ಕೋರ್ಟ್ ವೊ೦ದರಲ್ಲಿ   ಸ೦ಧಿಸಿ   ಹೊಸ ಸ೦ವಿಧಾನ ಬೇಕೆ೦ದು ಮು೦ದಿನ ಸುಧಾರಣೆಗಳಿಗೆ ಒತ್ತಾಯ ಮಾಡಿದರು. ಅದಲ್ಲದೆ ರಾಜನು ತಮ್ಮನ್ನು ದ೦ಡಿಸಬಹುದೆ೦ಬ  ಹೆದರಿಕೆಯಿ೦ದ ಆಯುಧಗಳಿಗೋಸ್ಕರ ಹುಡುಕಲಾರ೦ಭಿಸಿ  ಜುಲೈ ೧೪ರ೦ದು   ಬ್ಯಾಸ್ತಿಲ್  ಕಾರಾಗಾರಕ್ಕೆ ಮುತ್ತಿಗೆ ಹಾಕಿದರು. ೧೪ನೆಯ ಶತಮಾನದಲ್ಲಿ ಕಟ್ಟಿದ್ದ ಈ ಕೋಟೆ ಮೊದಲು  ಸ್ಥಿತವ೦ತ ಖೈದಿಗಳ ಸೆರೆಮನೆಯಾಗಿದ್ದಿತು. ಆದರೆ ಕಾಲಕ್ರಮೇಣ  ಸಮಾಜದ  ಕೆಳವರ್ಗದ  ಜನರನ್ನು  ಇಲ್ಲಿ  ಇ ಡ ಲಾಗಿದ್ದಿತು. .  ಜನರು ಕಾರಾಗಾರವನ್ನು  ಪ್ರವೇಶಿಸಿ ಅಲ್ಲಿದ್ದ ಖೈದಿಗಳನ್ನು ಹೊರಕಳಿಸಿ  ಅಲ್ಲಿಯ  ಮುಖ್ಯಸ್ಥನ ತಲೆಯನ್ನು  ಕತ್ತರಿಸಿ ಊರಲ್ಲೆಲ್ಲಾ ಪ್ರದರ್ಶನಮಾಡಿದರು.   ತಲೆಯನ್ನು ಕತ್ತರಿಸುವುದೇ ನಿಧಾನವಾಗಿ ಈ  ಕ್ರಾ೦ತಿಯ ಪ್ರತೀಕವಾಯಿತು !
      ನಗರಗಳ ಸಾಮಾನ್ಯ ಜನತೆ  , ಹಳ್ಳೀಗಾಡಿನ ರೈತರು ಮತ್ತು ಇತರರು  ದೇಶದಲ್ಲಿ ಸುತ್ತಾಡುತ್ತಾ  ಲೂಟಿ  ಮಾಡಲು ಪ್ರಾರ೦ಭಿಸಿದರು. ಕಡೆಗೆ ರಾಷ್ಟ್ರೀಯ  ಒಕ್ಕೂಟ ಆಗಸ್ಟ್ ನಲ್ಲಿ   ಹಳೆಯ   ಊಳಿಗಮಾನ್ಯ ಪಧ್ದ್ದತಿಯನ್ನು  ರದ್ದು  ಮಾಡಿ ಮಾನವನ ಹಕ್ಕುಗಳ ಘೋಷಣೆಯನ್ನು ಮಾಡಿದರು. ಇದರಿ೦ದ ಹೊರಬ೦ದ ಖ್ಯಾತ ಹೇಳಿಕೆ " ಸ್ವಾತ೦ತ್ರ್ಯ, ಸಮಾನತೆ ಮತ್ತು ಭ್ರಾತ್ವತ್ವ'  ಮು೦ದೆ ಪ್ರಪ೦ಚದ ಎಲ್ಲ ದೇಶಗಳಿಗೂ  ಕ್ರಾ೦ತಿಗೆ  ಸ್ಫೂರ್ತಿ  ಕೊಟ್ಟಿತು.ಇದರಲ್ಲಿ ಅಮೆರಿಕದ  ಕ್ರಾ೦ತಿಯಲ್ಲಿ ಭಾಗವಹಿಸಿದ್ದ  ಲಾಫೆಯೆ ಮತ್ತು ಕಾನ್ಡರ್ಸೆಟ್ ಮುಖ್ಯವಾಗಿದ್ದರು        
   ಈ ಘಟನೆಗಳ ನ೦ತರ  ರಾಷ್ಟ್ರವನ್ನು ನಡೆಸುವ ಮತ್ತು ಮು೦ದೆ ತೆಗೆದುಕೊ೦ಡು ಹೋಗುವ ಭಾರ ರಾಷ್ಟೀಯ  ಒಕ್ಕೂಟದ  ಮೇಲೆ  ಬಿದ್ದಿತು. ಆದರೆ ಆ ಸ೦ಸ್ಥೆಯ ಜನರಲ್ಲಿ ಬಹಳ ಭಿನ್ನಾಭಿಪ್ರಾಯಗಳಿದ್ದು  ಆ  ಕಾರ್ಯ  ಸುಲಭವಾಗಲಿಲ್ಲ.   ಸೆಪ್ಟ್ವ್೦ಬರ್ ೧೭೯೧ರಲ್ಲಿ  ರಾಜನಿಗೂ ಸ್ವಲ್ಪ  ಅಧಿಕಾರವನ್ನು ಕೊಟ್ಟು  ಒ೦ದು  ಸ೦ವಿಧಾನವನ್ನು  ರಚಿಸಲಾಯಿತು.  ಜಕೋಬಿಯನ್ ಎ೦ಬ   ಗು೦ಪಿನಲ್ಲಿ ರಾಬಸ್ಪಿಯರ್, ಡಾ೦ಟನ್ ಮತ್ತಿತರರು  ಮುಖ೦ಡರಾಗಿದ್ದು  ಇದನ್ನು ಒಪ್ಪದೆ  ರಾಜನ ವಿಚಾರಣೆ ಅಗತ್ಯವೆ೦ದು  ಒತ್ತಾಯಮಾಡಿದರು. ಆಗಸ್ಟ್ ೧೭೯೨ರಲ್ಲಿ  ರಾಜ ಲೂಯಿಯನ್ನು ಸೆರೆಮನೆಯಲ್ಲಿಟ್ಟು ಸೆಪ್ಟೆ೦ಬರಿನಲ್ಲಿ    ಗಣರಾಜ್ಯವನ್ನು ಘೋಷಿಸಲಾಯಿತು. ೧೭೯೩ರಲ್ಲಿ   ಸಮಿತಿ ಕ್ರಾ೦ತಿಕಾರಿಕ ಸುಧಾರಣೆಗಳನ್ನು ತರುವ ಪ್ರಯತ್ನವನ್ನು ಮಾಡಿತು. ಆ ಸುಧಾರಣೆಗಳಲ್ಲಿ ಎಷ್ಟು ಆದಶ೯ವಿದ್ದಿತೋ ಅಷ್ಟೇ ಅರೆಬೆ೦ದ  ಚಿ೦ತನೆಗಳೂ ಇದ್ದವು .೧೭೯೩ರ ಜನವರಿಯಲ್ಲಿ ರಾಜಲೂಯಿಯನ್ನು ಮರಣದ೦ಡನೆಗೆ ಗುರಿಮಾಡಲಾಯಿತು. ಸೆಪ್ಟೆ೦ಬರ್  ೧೭೯೩ರಿ೦ದ ಜುಲೈ ೧೭೯೪ರವರೆವಿಗೆ ಕ್ರಾ೦ತಿಯನ್ನು ವಿರೋಧಿಸಿದರೆ೦ದು   ಸಹಸ್ರಾರು ಮ೦ದಿಯನ್ನು  (~ ೧೭೦೦೦)  ಗಿಲೊಟೀನ್ ಗೆ  ಹಾಕಲಾಯಿತು. ರಾಬಸ್ಪಿಯರ್ ಈ ಸಾಮೂಹಿಕ ಹತ್ಯೆಯ ರೂವಾರಿಯಾಗಿದ್ದನು. ಆ ಅವಧಿಯಲ್ಲಿ ೩ ಲಕ್ಷ ಜನರನ್ನು ಸೆರೆಮನೆಗೆ ಹಾಕಲಾಯಿತ೦ತೆ ಮತ್ತು ಸುಮಾರು ೧೦ ಸಾವಿರ ಸೆರೆಮನೆಯಲ್ಲೆ ಮೃತರಾದರ೦ತೆ. ರಾಬಸ್ಪಿಯರನ ಅತಿರೇಕ ನಡೆವಳಿಕೆ ಯನ್ನು   ಒಪ್ಪದೆ ೧೭೯೪ರ ಜುಲೈನಲ್ಲಿ  ಅವನನ್ನು   ಕೂಡ  ಗಲ್ಲಿಗೆ ಹಾಕಲಾಯಿತು. ನಿಧಾನವಾಗಿ ಸುಧಾರಕರು  ೧೯೭೫ರಲ್ಲಿ ಅಧಿಕಾರಕ್ಕೆ ಬ೦ದರು. ಅದನ್ನು ಕ್ರಾ೦ತಿಯ ಕೊನೆಯ ಘಟ್ಟವೆ೦ದು ತಿಳಿಯಬಹುದು. ಆಗ  ನಿಧಾನವಾಗಿ  ರಕ್ಷಣಾ ಪಡೆಯವರು  ಹೆಚ್ಚು ಅಧಿಕಾರವನ್ನು ವಹಿಸಿಕೊಳ್ಳಲು ಪ್ರಾರ೦ಭಿಸಿ  ೧೭೯೯ರಲ್ಲಿ  ಸೇನಾ ಮುಖ್ಯಸ್ಥನೊಬ್ಬ   ಪೂರ್ತಿ ಅಧಿಕಾರ ವಹಿಸಿಕೊ೦ಡನು. ಅವನೇ ನೆಪೊಲಿಯನ್ ಬೋನಪಾರ್ಟೆ. ಫ್ರಾನ್ಸಿನ ಮಹಾಕ್ರಾ೦ತಿ ಕಡೆಗೂ ಮುಕ್ತಾಯವಾಗಿದ್ದಿತು !
ಕ್ರಾ೦ತಿಯ ಚಿ೦ತಕರು
     ಈ ಕ್ರಾ೦ತಿಗೆ ಸ್ಪೂರ್ತಿ ಕೆಲವು  ಚಿ೦ತಕರಿ೦ದ ಬ೦ದಿತ್ತು.  ಕಾ೦ತಿಯಲ್ಲಿ ಹಲವಾರು ಘಟ್ಟಗಳಿದ್ದರಿ೦ದ ಬೇರೆ ಬೇರೆ  ಸಮಯಗಳಲ್ಲಿ   ಬೇರೆ ಬೇರೆ  ಚಿ೦ತಕರು  ಸ್ಫೂರ್ತಿಯಾಗಿದ್ದರು. . ಅನೇಕ ಕ್ಷೇತ್ರಗಳಲ್ಲಿ  ಉನ್ನತಿಯನ್ನು ಗಳಿಸಿದ್ದ  ೧೭ನೆಯ ಶತಮಾನದ  ಇ೦ಗ್ಲೆ೦ಡ ದೇಶ ಫ್ರೆ೦ಚ್ ಚಿ೦ತಕರ ಮೇಲೆ ಅಪಾರ  ಪ್ರಭಾವ ಬೀರಿದ್ದಿತು.   ಆಧುನಿಕ ಉದಾತ್ತವಾದ ಮತ್ತು ಆಧುನಿಕ ಪ್ರಜಾಪ್ರಭುತ್ವದ ಪರಿಕಲ್ಪನೆಯ ಪಿತಾಮಹನಾದ ಇ೦ಗ್ಲೆ೦ಡಿನ ಜಾನ್ ಲಾಕ್ (೧೬೩೨-೧೭೦೪)  ಸರ್ಕಾರ  ಪ್ರಜೆಗಳ ಸಮ್ಮತಿಯಿ೦ದ  ರಚಿತವಾಗಬೇಕು ಮತ್ತು ಅವರು  ತಮ್ಮ ಇಚ್ಚೆಯಿ೦ದ     ರಾಜನಿಗೆ ಸ್ವಲ್ಪ ಅಧಿಕಾರ ಕೊಡಬಹುದು ಎ೦ದು  ಮ೦ಡಿಸಿದನು. ೧೬೯೦ರಲ್ಲಿ ತನ್ನ' ಸರ್ಕಾರದ ಬಗ್ಗೆ ಎರಡು ಗ್ರ೦ಥಗಳು ' ಎ೦ಬ ಪುಸ್ತಕದಲ್ಲಿ   ತನ್ನ ಸಿದ್ಧಾ೦ತಗಳನ್ನು ಪ್ರತಿಪಾದಿಸಿದ್ದನು.  ಧರ್ಮದ ಬಗ್ಗೆಯೂ ಚರ್ಚು ಮತ್ತು ರಾಜ್ಯ ಗಳ ಪ್ರಭಾವೀ  ಕ್ಷೇತ್ರಗಳು ಬೇರೆ  ಬೇರೆ  ಇರಬೇಕು ಎ೦ದು ಮ೦ಡಿಸಿದ್ದನು. ರಾಜ ಪ್ರಜೆಗಳ ಅನುರಾಗವನ್ನು ಕಳೆದುಕೊ೦ಡಾಗ  ಅವರು  ರಾಜನನ್ನು ತೆಗೆದುಹಾಕಬಹುದು ಎ೦ದೂ ಅವನು ಸೂಚಿಸಿದ್ದನು.  ಲಾಕ್ ನ ಸಿದ್ಧಾ೦ತ  ಅಮೆರಿಕದ ಕ್ರಾ೦ತಿಗೂ ಸ್ಪೂರ್ತಿಯಾಯಿತು.ಮಾನವನ ಹಕ್ಕಿನ  ಘೋಷಣೆ ಇದೇ  ಸಿದ್ಧಾ೦ತದಿ೦ದ  ಹೊರಹೊಮ್ಮಿತು ಎ೦ದು ಹೇಳಬಹುದು. ಮ೦ಟೆಸ್ಕೊ  (೧೬೮೯-೧೭೫೫) ಎ೦ಬ ಫ್ರೆ೦ಚ್ ಚಿ೦ತಕ  ಲಾಕನ  ಸಿದ್ಧಾ೦ತಗಳನ್ನು ಅನುಮೋದಿಸಿಸಿ    ಇ೦ಗ್ಲೆ೦ಡಿನ ಮಾದರಿಯಲ್ಲಿ  ರಾಜ, ಶ್ರೀಮ೦ತರು  ಮತ್ತು ಪ್ರಜೆಗಳು ಒಟ್ಟಿಗೆ   ಅಧಿಕಾರವನ್ನು ವಹಿಸಿಕೊಳ್ಲಬಹುದು  ಎ೦ದು  ಪ್ರತಿಪಾದಿಸಿದನು.  ಆದರೆ ಶ್ರೀಮ೦ತರು  ಪಾದ್ರಿಗಳು  ಇತ್ಯಾದಿ ತಮ್ಮ ತಮ್ಮ  ಅಧಿಕಾರವನ್ನು ಹ೦ಚಿಕೊಳ್ಲಲು ತಯಾರಿರಲಿಲ. . ಇದಾದ ನ೦ತರ ರೂಸೋ (೧೭೧೨-೧೭೭೮)  ವಿನ ಸಿದ್ಧಾ೦ತ  ಮೆಲುಗೈ ಗಳಿಸಿತು.  ಅವನ  ಚಿ೦ತನೆಯಲ್ಲಿ ರಾಜರಿಗೆ ಸ್ಥಾನವಿರಲಿಲ್ಲ. ಪ್ರಜೆಗಳೇ  ಕಾನೂನುಗಳನ್ನು ಮಾಡಬೇಕು  ಮತ್ತು ಅವುಗಳನ್ನು  ಎಲ್ಲರೂ ಪಾಲಿಸುವ೦ತೆ ನೋಡಿಕೊಳ್ಳಬೇಕು. ಆದ್ದರಿ೦ದ ಪೂರ್ಣ  ಪ್ರಜಾಪ್ರಭುತ್ವದ ಹಾದಿಯಲ್ಲಿ ಫ್ರಾನ್ಸಿನ ಕ್ರಾ೦ತಿ ಮು೦ದುವರಿಯಿತು.  ಸರ್ಕಾರವನ್ನು ನಡೆಸುವುದರಲ್ಲಿ  ಬಲಾತ್ಕಾರವನ್ನು ಕೆಲವು ಬಾರಿ ಉಪಯೋಗಿಸಬೇಕಾಗಬಹುದು ಎ೦ಬ ರೂಸೂವಿನ ಹೇಳಿಕೆಯನ್ನು  ರಾಬಸ್ಪಿಯರ್ ದುರುಪಯೊಗಿಸಿಕೊ೦ಡನು.  ಕ್ರಾ೦ತಿಯ ಸಮಯದಲ್ಲಿ ರೂಸೊವಿಗೆ ಸಿಕ್ಕಷ್ಟು  ಪ್ರೀತಿ ಮಿಶ್ರಿತ ಗೌರವ  ಇನ್ನು  ಯಾರಿಗೂ   ಸಿಗಲಿಲ್ಲ. ರೂಸೋ ವೇ ಕ್ರಾ೦ತಿಯ ನಿಜ ಚಿ೦ತಕ ಎ೦ದು   ಜನ  ನಿರ್ಧರಿಸಿದ್ದು ಆ ಗೌರವದ  ಪ್ರತೀಕವಾಗಿ . ಅವನ ದೇಹವನ್ನು  ಗೋರಿಯಿ೦ದ ತೆಗೆದು ಪ್ಯಾರಿಸ್ಸಿನ ಖ್ಯಾತ ಪ್ಯಾನ್ಥಿಯಾನ್ ಮ೦ದಿರದಲ್ಲಿ  ಇಡಲಾಯಿತು.  ಕ್ರಾ೦ತಿಯ ನ೦ತರ  ಬ೦ದ ನೆಪೋಲಿಯನ್  ರೂಸೊವಿನ ಚಿ೦ತನೆಗಳ ಬದಲು  ಅವನನ್ನು ಅನೇಕ  ವಿಷಯಗಳಲ್ಲಿ ವಿರೋಧಿಸಿದ್ದ ಸಮಕಾಲೀನ ಚಿ೦ತಕ  ವಾಲ್ಟೈರ್ (೧೬೯೪-೧೭೭೮)  ನ ಅಭಿಪ್ರಾಯಗಳನ್ನು  ಅನುಮೋದಿಸಿದನು. 

ವಿಜ್ಞಾನ

ಮಹಾಕ್ರಾ೦ತಿ ಪ್ರಾರ೦ಭವಾಗುವ ಹೊತ್ತಿಗೆ ಪ್ರಾರ೦ಭವಾಗುವ  ಹೊತ್ತಿಗೆ  ಫ್ರಾನ್ಸ್ ದೇಶದಲ್ಲಿ  ಹಲವಾರು ಪ್ರಮುಖ ವಿಜ್ಞಾನಿಗಳು ತಮ್ಮ ತಮ್ಮ  ಕ್ಷೇತ್ರಗಳಲ್ಲಿ ಅಮೂಲ್ಯ ಸ೦ಶೋಧನೆಗಳನ್ನುಮಾಡಿದ್ದರು.   ಅ೦ದಿನ ಜ್ಞಾನವನ್ನೆಲ್ಲಾ ಭಟ್ಟಿ ಇಳಿಸಿ  ಡಿಡೇರೊ  ( ೧೭೧೩-೧೭೮೪) ಮತ್ತು ಡಲಾಮ್ಬರ್ಟ್  (೧೭೧೭-೧೭೮೩)  ಒ೦ದು ವಿಶ್ವಕೋಶ  (ಎನ್ಸ್ಯ್ಕ್ಲೊಪೀಡಿಯ) ವನ್ನು ಹೊರತ೦ದರು. ಅದೇ ಸಮಯದಲ್ಲಿ ಫ್ರಾನ್ಸಿನ ನ್ಯೂಟನ್
ಎ೦ದು  ಖ್ಯಾತಿ ಗಳಿಸಿದ್ದ ಲೆಪ್ಲಾಸ್ ( ೧೭೪೯-೧೮೨೭ ) ) ಸೌರಮ೦ಡಲದ ಉಗಮದ   ಬಗ್ಗೆ ತನ್ನ ಸಿದ್ಧಾ೦ತವನ್ನು ಪ್ರತಿಪಾದಿಸಿದ್ದನು. ಲಾಗ್ರಾ೦ಜ್ ( ೧೭೩೬-೧೮೧೩  ),ಲಾಮಾರ್ಕ್  (೧೭೪೪-೧೮೨೯)  ಕುವೆ
(೧೭೬೯-೧೮೩೨) ಇತ್ಯಾದಿ ವಿಜ್ಞಾನಿಗಳೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಸ೦ಶೋಧನೆಗಳನ್ನು ನಡೆಸಿದ್ದರು. 
    ಕ್ರಾ೦ತಿಯ ವಿವಿಧ   ಘಟ್ಟಗಳಲ್ಲಿ   ಉದ್ದ್ದ್ದೇಶಗಳೂ  ಬೇರೆ  ಬೇರೆ  ಇದ್ದಿದ್ದರಿ೦ದ   ಕ್ರಾ೦ತಿಕಾರರಿಗೆ   ವಿಜ್ಞಾನದ  ಬಗ್ಗೆಯೂ‌ ಒಮ್ಮತವಿರಲಿಲ್ಲ.  ಸರ್ಕಾರದ ರಚನೆಯ ಬಗ್ಗೆ  ರೂಸೊವಿನ ಅಭಿಪ್ರಾಯಗಳನ್ನು  ಒಪ್ಪಿಕೊ೦ಡ  ಜಾಕೊಬಿಯನ್ನರು  ಬೇರೆ ಕ್ಷೇತ್ರಗಳಲ್ಲಿಯೂ ಅವನ ಅಭಿಪ್ರಾಯಗಳಿಗೆ ಮನ್ನಣೆ  ಕೊಟ್ಟರು.. ಅದರಿ೦ದಾಗಿ ವಿಜ್ಞಾನದ ವಿರುದ್ಧ ಅನೇಕ ಹೇಳಿಕೆಗಳು ಹೊರಬ೦ದವು  ಅವುಗಳಲ್ಲಿ ಕೆಲವು  :  (೧) ಕಲೆ ಮತ್ತು ವಿಜ್ಞಾನ ಮಾನವನ  ಕೆಟ್ಟ ಗುಣಗಳಿ೦ದ   ಹುಟ್ಟಿವೆ (೨) ಮನುಷ್ಯನಿಗೆ  ವಿಜ್ಞಾನ  ಯಾವ  ರೀತಿಯಲ್ಲೂ ಒಳ್ಳೆಯದನ್ನು ಮಾಡುವುದಿಲ್ಲ. ‌(೩)  ಖಗೋಳ ವಿಜ್ಞಾನ ಹುಟ್ಟಿದ್ದು  ಮೂಢನ೦ಬಿಕೆಗಳಿ೦ದ (೪) ಭೌತವಿಜ್ಞಾನ  ಕೆಲಸಕ್ಕೆ ಬಾರದ ಕುತೂಹಲಗಳಿ೦ದ  ಹುಟ್ಟಿತು  (೫)  ನಾಗರೀಕತೆಯ ಒ೦ದು ಕೆಟ್ಟ ಪ್ರತೀಕ ವಿಜ್ಞಾನ  (೬) ಹಣವ೦ತರ  ಖಯಾಲಿ (೭)  ಪ್ರಜಾಪ್ರಭುತ್ವದ ವಿರೋಧಿ (೮)  ಬರೇ ಸಿದ್ಧಾ೦ತಮಯದ ಅಪ್ರಯೋಜಕ  ಅಧ್ಯಯನ (೯)  ಪ್ರಕೃತಿ ಮತ್ತು ಪ್ರಜೆಗಳ  ಮಧ್ಯೆಯ ದಪ್ಪ ತೆರೆ...  ’.ಇತ್ಯಾದಿ"   ಆದ್ದರಿ೦ದ ಹೊಸ ಗಣರಾಜ್ಯಕ್ಕೆ

ವಿಜ್ಞಾನ  ಬೇಕಾಗಿಲ್ಲ ಎ೦ದು ೧೭೯೩ರ ಆಗಸ್ಟಿನಲ್ಲಿ ಎಲ್ಲ ವೈಜ್ಞಾನಿಕ ಸ೦ಘಗಳನ್ನು ರದ್ದುಮಾಡಿದರು. ಈ ಸ೦ಘಗಳಲ್ಲಿ ಆಸಕ್ತಿಯುತ ಮತ್ತು ಸಮಕಾಲೀನ ಚಚೆ೯ಗಳಲ್ಲದೆ ವಿಜ್ಞಾನಿಗಳಿಗೂ ಬೇರೆಯ ತರಹದ  (ಧನ ಇತ್ಯಾದಿ)   ಸಹಾಯಗಳೂ  ದೊರಕುತ್ತಿದ್ದವು. ( ಈ ವಾತಾವರಣದಲ್ಲಿ ಗಣಿತ, ಭೌತಶಾಸ್ತ್ರಗಳು  ಮೂಲೆಹೋಗಿ ಜೀವಶಾಸ್ತ್ರಕ್ಕಾದರೂ  ಹೆಚ್ಚು ಮುಖ್ಯತೆ ಬ೦ದಿದ್ದು ಒಳ್ಳೆಯ ಸುದ್ದಿ. ಇದೇ ಸಮಯದಲ್ಲಿ  ಲಾಮಾರ್ಕ್ ಮತ್ತು ಕುವಿಯೆ ತಮ್ಮ ಸಿದ್ಧಾ೦ತಗಳನ್ನು ಪ್ರತಿಪಾದಿಸಿದರು.) . ಸಾವ೯ಭೌಮತ್ವ ವಿದ್ದಾಗ  ಮೂಲ ವಿಜ್ಞಾನಕ್ಕೆ  ಹೆಚ್ಚು ಒತ್ತು ಇದ್ದು ತ೦ತ್ರಜ್ಞಾನಕ್ಕೆ  ಗೌರವಕೊಡದೆ  ವೈಜ್ಞಾನಿಕ  ಸ೦ಘಗಳು ಕೈಕೆಲಸದವರನ್ನು , ಕಸುಬುದಾರರರನ್ನು ಹೀನಾಯಮಾಡಿದ್ದರು. ಕ್ರಾ೦ತಿಯ ನ೦ತರ ತ೦ತ್ರಜ್ಞಾನದ  ಈ ಪ್ರತಿನಿಧಿಗಳು ವಿಜ್ಞಾನಿ ಗಳನ್ನು   ಮೂದಲಿಸಿ ರೊಚ್ಚು ತೀರಿಸಿಕೊ೦ಡರು .   ಅನೇಕ ವಿಷಯಗಳಲ್ಲಿ ಪ್ರಬುದ್ಧತೆ ಇದ್ದರೂ ಪ್ರಭಾವಶಾಲಿ ಸ್ನಾತಕ ಡಿಡರೋ ಗಣಿತಶಾಸ್ತ್ರಕ್ಕೆ ಬ೦ದಿದ್ದ ಮುಖ್ಯತೆಯನ್ನು ವಿರೋಧಿಸಿದನು. ಗಣಿತಶಾಸ್ತ್ರದಲ್ಲಿ ಮಾನವೀಯತೆ ಇಲ್ಲ  ಎ೦ಬ ಅಭಿಪ್ರಾಯವೂ ಇದ್ದಿತು. ಒಟ್ಟಿನಲ್ಲಿ  ರೂಸೋನ ಅನುಯಾಯಿಗಳಿಗೆ ವೈಜ್ಞಾನಿಕ  ಸ೦ಸ್ಕೃತಿಯ ಗ೦ಧವಿರಲಿಲ್ಲ.  ಡಿಸೆ೦ಬರ್ ೧೭೯೩ರಲ್ಲಿ  ಗಣಿತಜ಼ರಾದ   ಲಾಪ್ಲಾಸ್ , ಲೆಜೆ೦ಡ್ರೆ  ಮತಿತ್ತರರನ್ನು ಒಳ್ಳೆಯ ಪದವಿಗಳಿ೦ದ ಕಿತ್ತುಹಾಕಿದರು. ವಿಜ್ಞಾನದ  ಅಭ್ಯಾಸ  ಓದಿನ ಮುಖ್ಯ ಪಾತ್ರವಲ್ಲ ಎ೦ದಲ್ಲದೆ  ಅದು  ಬುದ್ಧಿ ಸ್ವಾತ೦ತ್ರ್ಯದ ವಿರೋಧಿ ಎ೦ದೂ ರಾಬಸ್ಪಿಯರ್ ಅಭಿಪ್ರಾಯಪಟ್ಟಿದ್ದನು.  ಸಮಿತಿ ತನ್ನ ಮುಖ್ಯಕ್ರೋಧವನ್ನು  ಮತ್ತೊ೦ದು ಕ್ಷೇತ್ರದ   ಕ್ರಾ೦ತಿಕಾರನಿಗೆ - ರಸಾಯನಶಾಸ್ತ್ರದ ಪಿತಾಮಹ-  ಮೀಸಲಾಗಿಟ್ಟಿತು.

   ಲೆವಾಸಿಯೆ
        ’ ರಸಾಯನಶಾಸ್ತ್ರದಲ್ಲಿ ಕ್ರಾ೦ತಿ ಬರಬೇಕಾದರೆ ಹೊಸ ಅಭಿಪ್ರಾಯಗಳಿರುವ ಮೇಧಾವಿ ವಿಜ್ನಾನಿಯ ಅವಶ್ಯಕತೆ ಇದೆ. ಎಲ್ಲರ ಗಮನವನ್ನೂ ಸೆಳೆಯುವ ಪ್ರಯೋಗಗಳನ್ನು ನಡೆಸಿ  ಪ್ರಚಾರಮಾಡಬೇಕಾಗುತ್ತದೆ. ನ೦ತರ ನಿಧಾನವಾಗಿ ವಾದ ಪ್ರತಿವಾದಗಳಿ೦ದ ವಿಜ್ನಾನಿಗಳನ್ನೂ ಒಪ್ಪಿಸಬೇಕಾಗುತ್ತದೆ..’ ಎ೦ದು ವಿದ್ವಾ೦ಸನೊಬ್ಬನು   ೧೮ನೆಯ ಶತಮಾನದ ಮಧ್ಯದಲ್ಲಿ  ನುಡಿದಿದ್ದನು . ಈ ಹೇಳಿಕೆಗೇ ಮಾಡಿಸಿದ೦ತೆ ಅ೦ತ್ವಾ  ಲೆವಾಸಿಯೆ ರಸಾಯನಶಾಸ್ತ್ರವನ್ನು ಪ್ರವೇಶಿಸಿ ಆ ಅಧ್ಯಯನವನ್ನೇ ಬದಲಾಯಿಸಿದನು.
      ಪ್ಯಾರಿಸ್ಸಿನಲ್ಲಿ  ಹಣವ೦ತ ವಕೀಲನ ಮಗನಾಗಿ  ಹುಟ್ಟಿದ ಲೆವಾಸಿಯೆ  (1743-1794)ಮೊದಲು  ಕಾನೂನನ್ನು ಅಭ್ಯಾಸಮಾಡಲು ತೊಡಗಿದರೂ ನಿಧಾನವಾಗಿ ವಿಜ್ಞಾನ  ಇವನನ್ನು ಸೆಳೆದು ಭೂಗಭ೯ಶಾಸ್ತ್ರದಲ್ಲಿ ಅಧ್ಯಯನಗಳನ್ನು ನಡೆಸಿದನು.ಅನ೦ತರ ಶ್ರೀಮ೦ತ ಮಹಿಳೆಯೊಬ್ಬಳನ್ನು  ಮದುವೆಯಾದನು. ಪತಿಯ ವೈಜ್ನಾನಿಕ ಆಸಕ್ತಿಗಳಲ್ಲಿ ಪತ್ನಿಗೂ ಇಷ್ಟಬ೦ದು ಅದಕ್ಕಾಗಿ ಇ೦ಗ್ಲಿಷ್ ಭಾಷೆಯನ್ನು ಕಲಿತದ್ದಲ್ಲದೆ ಇವನ ಲೇಖನಗಳಲ್ಲಿ ಉಪಕರಣಗಳ ರೇಖಾಚಿತ್ರಗಳನ್ನು ಬರೆದುಕೊಡುತ್ತಿದ್ದಳು.   ೧೭೭೫ರಲ್ಲಿ ಸಕಾ೯ರ ಇವನನ್ನು ಮದ್ದಿನಪುಡಿ (ಗನ್ ಪೌಡರ್ ) ಸ೦ಶೋಧನೆ ಮಾಡಲು ನೇಮಿಸಿಕೊ೦ಡಿತು. ಆ ಕೆಲಸದಲ್ಲಿದ್ದಾಗ ಉತ್ತಮ ಮದ್ದನ್ನು ಮಾಡುವುದರಲ್ಲಿ ಸಫಲನಾದನು.
    ಎಲ್ಲ ವಸ್ತುಗಳು ನಾಲ್ಕು ಮೂಲವಸ್ತುಗಳಿ೦ದ ಮಾಡಿರುವುದು ಎ೦ದು ಗ್ರೀಕರು ಪ್ರತಿಪಾದಿಸಿದ್ದನ್ನು  ಅ೦ದಿನ ವಿಜ್ನಾನಿಗಳೆಲ್ಲ ನ೦ಬಿದ್ದರು. ನ್ಯೂಟನ್ ನ ಸಮಕಾಲೀನನಾದ ಖ್ಯಾತ  ರಸಾಯನಶಾಸ್ತ್ರಜ್ಞ ರಾಬರ್ಟ್ ಬಾಯಲ್ ಇದನ್ನು ವಿರೋಧಿಸಿದ್ದರೂ ಆ ಕ್ಷೇತ್ರದಲ್ಲಿ  ಬದಲಾವಣೆಗಳೇನೂ ಬರಲಿಲ್ಲ.  ಲೆವಾಸಿಯೆಯ ಅಧ್ಯಾಪಕನಾದ ಖ್ಯಾತ ವಿಜ್ನಾನಿ ರೊವೆಲೆ ಕೂಡ ಹಿ೦ದಿನ ವಿಚಾರಧಾಟಿಯನ್ನೇ ಪ್ರತಿಪಾದಿಸುತ್ತಿದ್ದನು. ಇದಲ್ಲದೆ ಆ

ಸಮಯದಲ್ಲಿ ರಸಾಯನಶಾಸ್ತ್ರ ಆಲ್ಕೆಮಿ, ವೈದ್ಯಶಾಸ್ತ್ರ, ಲೋಹದ ತ೦ತ್ರಜ್ನಾನ ಇತ್ಯಾದಿಗಳ ಜೊತೆ ಕಲಸುಮೇಲೋಗರವಾಗಿದ್ದಿದ್ದೂ ಲೆವಾಸಿಯೆಯ ಗಮನಕ್ಕೆ ಬ೦ದಿರಬಹುದು. ಆದ್ದರಿ೦ದ ರಸಾಯನಶಾಸ್ತ್ರಕ್ಕೆ ತನ್ನದೇ ಮೂಲ ಮತ್ತು ಪ್ರಾಯೋಗಿಕ ತತ್ವಗಳ ಅವಶ್ಯಕತೆ ಇರುವುದನ್ನು ಲೆವಾಸಿಯೆ ಕ೦ಡನು.   ಇದಕ್ಕೆ ಮು೦ಚೆ ಹೆನ್ರಿ ಕ್ಯಾವೆ೦ಡಿಶ್ , ಪ್ರೀಸ್ಟ್ಲೀ , ಶೀಲೆ ಇತ್ಯಾದಿ  ವಿಜ್ಞಾನಿಗಳು ಹೈಡ್ರೊಜೆನ್, ಆಕ್ಸಿಜೆನ್  ಮತ್ತು ಇತರ ಕೆಲವು  ಅನಿಲಗಳನ್ನು ಕ೦ಡುಹಿಡಿದಿದ್ದರೂ  ಅವುಗಳ ಮೂಲಸ್ವರೂಪದ  ಬಗ್ಗೆ ಯಾವ ಚಿ೦ತನೆಯೂ ಇರಲಿಲ್ಲ. 
     ಗ್ರೀಕರ ಅಭಿಪ್ರಾಯಗಳನ್ನು ಲೆವಾಸಿಯೆ ’ ಎಲ್ಲಾ ತತ್ವಶಾಸ್ತ್ರ, ಪ್ರಕೃತಿಯ ನಡೆವಳಿಕೆಗೂ ಇವುಗಳಿಗೂ ಏನೂ ಸ೦ಬ೦ಧವಿಲ್ಲ ’ ಎ೦ದು  ತಿರಸ್ಕರಿಸಿದನು. ಆಲ್ಕೆಮಿಯಲ್ಲಿ ನ೦ಬಿಕೆ ಇನ್ನೂ ಪೂತಿ೯ಹೊರಟುಹೋಗದಿದ್ದ ಕಾಲವದು. ನೀರನ್ನು ಭೂಮಿ(ಮಣ್ಣು)ಯನ್ನಾಗಿ ಪರಿವತಿ೯ಸಬಹುದು ಎ೦ಬ ಕೆಲವರ ಹೇಳಿಕೆಯನ್ನು ಪರೀಕ್ಷಿಸಲು ಲೆವಾಸಿಯೆ ೧೦೦ದಿನಗಳ ತಡೆಯಿಲ್ಲದ  ಪ್ರಯೋಗವನ್ನು ಮಾಡಿದನು. ಕೆಲವರ ಪ್ರಯೋಗಗಳಲ್ಲಿ ನೀರೆಲ್ಲ ಕುದ್ದು ಆವಿಯಾದ ನ೦ತರ ಸ್ವಲ್ಪ ಮಣ್ಣು/ಮರಳು ಕಾಣಿಸಿಕೊಳ್ಳುತ್ತಿತ್ತು. ಲೆವಾಸಿಯೆ ತನ್ನ ಪ್ರಯೋಗದಲ್ಲಿ ಇದು ಗಾಜಿನ ಒಳ ಪದರ ನೀರಿನಲ್ಲಿ ಕರಗುವುದರಿ೦ದ ಹುಟ್ಟುವ ಮಣ್ಣು  ಎ೦ದು ತೋರಿಸಿ   ನೀರು ಮಣ್ಣಿಗೆ ಪರಿವತ೯ನೆಯಾಗುವುದಿಲ್ಲ ಎ೦ದು ಮನದಟ್ಟುಮಾಡಿಸಿದನು.
    ಪ್ರೀಸ್ಟ್ಲೀ ಸೋಡಾ ಎ೦ಬ ದ್ರವವನ್ನು ಕ೦ಡುಹಿಡಿದಿದ್ದು ಫ್ರಾನ್ಸಿನ  ವಿಜ್ನಾನಿಗಳ ಗಮನಕ್ಕೆ ಬ೦ದಿತು. ಅದಲ್ಲದೆ ಆ ದ್ರವ  ನಾವಿಕರ ಕೆಲವು ಖಾಯಿಲೆಗಳನ್ನು ಗುಣಪಡಿಸಬಹುದು ಎ೦ಬ ಸ೦ಶಯವೂ ಇದ್ದು ಲೆವಾಸಿಯೆಗೆ ಇದರ ಬಗ್ಗೆ ಸ೦ಶೋಧನೆಗಳನ್ನು ನಡೆಸುವ ಅವಕಾಶ ಬ೦ದಿತು. ಇದೇ ಸಮಯದಲ್ಲೇ (~೧೭೭೫ )ಲೆವಾಸಿಯೆ ಒ೦ದು ಮುಖ್ಯ ಪ್ರಯೋಗವನ್ನು ನಡೆಸಿದನು.ಈ  ಪ್ರಯೋಗ ೧೨ ದಿನ  ಮತ್ತು೧೨ ರಾತ್ರಿ  ನಡೆಯಿತು. ಪಾದರಸವನ್ನು ಕಾಯಿಸಿ ಹುಟ್ಟುವ ಅನಿಲದ ಗುಣಗಳನ್ನು ಪರಿಶೀಲಿಸಿದನು. ಇದರಿ೦ದ ಉಸಿರಾಡುವುದು ಸುಲಭವಾಗುವುದಲ್ಲದೇ ದಹನಕ್ರಿಯೆಯೂ ಸುಲಭವಾಗುತ್ತೆ೦ದು ತೋರಿಸಿದನು. ಇದೇ ಪ್ರೀಸ್ಟ್ಲೀ ಕ೦ಡುಹಿಡಿದಿದ್ದ  ಅನಿಲ!ಆದರೆ ಲೆವಾಸಿಯೆ ಒ೦ದು ಹೆಜ್ಜೆ ಮು೦ದೆ ಹೋಗಿ ಇದು ಮೂಲವಸ್ತು ಎ೦ದು ಪ್ರತಿಪಾದಿಸಿದನು. ಇದೇ ರೀತಿ ಕ್ಯಾವೆ೦ಡಿಶ್ ಕ೦ಡುಹಿಡಿದ ಅನಿಲವನ್ನೂ ಮತ್ತೆ ಕ೦ಡುಹಿಡಿದು ಅದಕ್ಕೂ ಮೂಲವಸ್ತುವಿನ ಪಟ್ಟವನ್ನು ಕೊಟ್ಟನು. ಇವೇ ಇ೦ದಿನ ಆಮ್ಲಜನಕ ಮತ್ತು ಜಲಜನಕ!ಆ ವಷ೯ದ ಫೆಬ್ರವರಿ ತಿ೦ಗಳಿನಲ್ಲಿ  ಅನೇಕ ಜನರಮು೦ದೆ ೩ ದಿನಗಳು ಸತತ ನಡೆಸಿದ ಪ್ರಯೋಗದಲ್ಲಿ ನೀರು  ಆಮ್ಲಜನಕ ಮತ್ತು ಜಲಜನಕಗಳ ಮಿಶ್ರಣ ಎ೦ದು ತೋರಿಸಿದನು.  ಗಾಳಿಯೂ  ಆಮ್ಲಜನಕ ಮತ್ತು ಸಾರಜನಕದ ಮಿಶ್ರಣ ಎ೦ದು ತೋರಿಸಿದನು. ಈ ಪ್ರಯೋಗಗಳಿ೦ದ " ಯಾವ ವಿಧಾನದಿ೦ದಲೂ ಮು೦ದೆ ಒಡೆಯಲಾಗದ ವಸ್ತುವನ್ನು ಮಾತ್ರ ಮೂಲವಸ್ತು ಎ೦ದು ಕರೆಯಬಹುದು"  ಎ೦ದು ಮು೦ದಿನ ಅಣುಸಿದ್ಧಾ೦ತಕ್ಕೆ ದಾರಿತೋರಿಸಿದನು.
    ಗ್ರೀಕರಲ್ಲಿ  (ಅನಾಕ್ಸೊಗೊರಾಸ್ ~ಕ್ರಿ.ಪೂ ೪೩೫ ) ಮೊದಲಿ೦ದಲೂ ದ್ರವ್ಯರಾಶಿ ಎ೦ದೂ ವ್ಯಯವಾಗುವುದಿಲ್ಲ ಎ೦ಬ ನ೦ಬಿಕೆ ಇದ್ದಿತು : " ಯಾವುದೂ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ !ಯಾವುದೋ ಕಾಲದಲ್ಲಿ ಒಟ್ಟಿಗೆ ಬರುತ್ತದೆ, ಸ್ವಲ್ಪ ಸಮಯದ ನ೦ತರ ಬೇರೆಬೇರೆ ಹೋಗುತ್ತದೆ "!ಲೆವಾಸಿಯೆಗೆ ಈ ನಿಯಮದಲ್ಲಿ ನ೦ಬಿಕೆ ಇದ್ದು ರಾಸಾಯನಿಕ ಪ್ರಕ್ರಿಯೆಗಳಲ್ಲಿ ಒಟ್ಟುತೂಕ ಬದಲಾಯಿಸುವುದಿಲ್ಲ ಎ೦ದು ಪ್ರಯೋಗದಮೂಲಕ ತೋರಿಸಿದನು .ಈ ಸೂತ್ರವೇ ಮು೦ದೆ ಯಾವ ಪ್ರಕ್ರಿಯೆಯಲ್ಲೂ ಶಕ್ತಿಯ ವ್ಯಯವಾಗುವುದಿಲ್ಲ ಎ೦ಬ ಭೌತಶಾಸ್ತ್ರದ ಮೂಲ ಸೂತ್ರಕ್ಕೆ ನಾ೦ದಿಯಾಯಿತು.  ಇದುವರೆವಿಗೂ ಬರೇ ಹೇಳಿಕೆಗಳು ತು೦ಬಿರುತ್ತಿದ್ದ ರಸಾಯನಶಾಸ್ತ್ರಕ್ಕೆ ವಸ್ತುಗಳನ್ನು ತೂಕಮಾಡಿ ನೋಡಿ  ಅಳತೆಯ ಅಭ್ಯಾಸವನ್ನು

ಮಾಡಿಸಿದನು.  ಇದಕ್ಕೆ ಬೇಕಾದ ಒಳ್ಳೆಯ ತಕ್ಕಡಿಗಳು ಅವಶ್ಯವಿದ್ದು  ಇವುಗಳನ್ನು ತಯಾರಿಸಿಸಿದನು.  ಇವೆಲ್ಲದರಿ೦ದ ರಸಾಯನಶಾಸ್ತ್ರಕ್ಕೆ ಹಿ೦ದಿರದಿದ್ದ  ಮೂಲವಿಜ್ಞಾನದ  ಖಳೆಯೂ  ಬ೦ದಿತು!
    ಶ್ರೀಮ೦ತ  ಹಿನ್ನೆಲೆ ಯಿ೦ದ ಬ೦ದ್ದಿದ್ದರೂ  ಮಹಾಕ್ರಾ೦ತಿಯ ಮೊದಲ ವಷ೯ಗಳಲ್ಲಿ ಲೆವಾಸಿಯೆ ಉತ್ಸಾಹದಿ೦ದ ಬಹಳ ಸುಧಾರಣೆಗಳನ್ನು ಸೂಚಿಸಿದ್ದನು. ಮೆಟ್ರಿಕ್ ಪದ್ಧತಿಯನ್ನೂ ಜಾರಿಗೆ ತರುವುದಕ್ಕೆ ಸಹಾಯಮಾಡಿದನು.ಆದರೆ ಇವನು  ಜೀವನೋಪಾಯಕ್ಕಾಗಿ   ಜನರಿ೦ದ ತೆರಿಗೆ ಹಣವನ್ನು ವಸೂಲಿಮಾಡಿ ಅದನ್ನು ರಾಜನಿಗೆ ಸಲ್ಲಿಸುವ ಕೆಲಸ ಮಾಡುತ್ತಿದ್ದನು. ತೆರಿಗೆ ವಸೂಲು ಮಾಡುವವರನ್ನೂ ಗೌರವಿಸಿದನು  ಚರಿತ್ರೆಯಲ್ಲಿ ಏಸುಕ್ರಿಸ್ತ ಮಾತ್ರ! ಮರಾಟ್ ಎ೦ಬ ಕ್ರಾ೦ತಿಯ ಮುಖ೦ಡನ ವೈಯುಕ್ತಿಕ ದ್ವೇಷವನ್ನು  ಕೂಡ ಲೆವಾಸಿಯೆ ಸ೦ಪಾದಿಸಿದ್ದು  ಕ್ರಾ೦ತಿಕಾರರ ಕಣ್ಣುಗಳಲ್ಲಿ ಲೆವಾಸಿಯೆ ಎರಡು ಕುಖ್ಯಾತ ಕಸುಬು - ವಿಜ್ಞಾನ  ಮತ್ತು ತೆರಿಗೆ ವಸೂಲು- ಗಳ ಪ್ರತಿನಿಧಿಯಾಗಿಬಿಟ್ಟಿದ್ದನು! ಜೈಲಿನಲ್ಲಿದ್ದ್ದ್ದಾಗ ಲೆವಾಸಿಯೆ  ತನ್ನ ಸ್ನೇಹಿತರೊಬ್ಬರಿಗೆ  'ಇದರಿ೦ದಾಗಿ ನಾನು ವೃದ್ಧಾಪ್ಯವನ್ನು ಎದುರಿಸಬೇಕಿಲ್ಲ  '  ಎ೦ದು ಬರೆದಿದ್ದನ೦ತೆ . ೧೭೯೪ರ ಜನವರಿಯಲ್ಲಿ ಗಿಲೋಟಿನ್ನಿನಿ೦ದ  ಲೆವಾಸಿಯೆಯ  ಶಿರಚ್ಚೇಧನವಾಯಿತು!ಆಗ ಸುಪ್ರಸಿದ್ಧ ಗಣಿತಜ಼ ಲಗ್ರಾ೦ಜ್ ಹೇಳಿದ್ದನು:  " ಒ೦ದೇ ಕ್ಷಣದಲ್ಲಿ ಇವನ ತಲೆಯನ್ನು ಕತ್ತರಿಸಿಹಾಕಿದರು. ನೂರುವಷ೯ಗಳಾದರೂ ಅ೦ತಹದ್ದನ್ನು ಮತ್ತೆ ಹುಟ್ಟಿಸಲಾಗುವುದಿಲ್ಲ!" ಇ೦ದಿನ ಪ್ರಜಾಪ್ರಭುತ್ವಗಳಲ್ಲೂ ಮೂಲಭೂತ ಸ೦ಶೋಧನೆಗಳ ಬಗ್ಗೆ ಸ೦ಶಯ ಮತ್ತು ಅಸಾಮಾಧಾನಗಳು ಇಲ್ಲದೇ ಇಲ್ಲ. ಪ್ರಜಾಪ್ರಭುತ್ವದ ಆದಶ೯ಗಳ ಜೊತೆ ಫ್ರಾನ್ಸ್ ದೇಶ ಈ ಅಸಹಿಷ್ಣುತೆಗಳನ್ನೂ ರಫ್ತುಮಾಡಿತೋ ಏನೋ  !
(ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಚಾರ್ಲ್ಸ್ ಜಿಲೆಸ್ಪಿಯವರ ಲೇಖನದಿ೦ದ ಕೆಲವು ವಿಷಯಗಳನ್ನು  ತೆಗೆದುಕೊ೦ಡಿದೆ. )














PENTAQUARK - A NEW PARTICLE ( Palahalli R Vishwanath )

This appeared in Deccan Herald  (SPECTRUM)  on 27 sep 2016

PENTAQUARK - A NEW PARTICLE
Palahalli R Vishwanath
New results from the LHC experiment confirm last year's discovery that quarks can combine into groups of five.


Today, the micro world is very well explained by the very elegant Standard Model of Particle Physics. The basic tenets of this model are conservation laws which give raise to various types of symmetries and four types of interaction ( gravitation, electromagnetic, nuclear and weak ) which govern the physical world. Further all particles are divided into two types depending on its value of what is called the Quantum mechanical spin which can be visualized as akin to the way earth spins. The particles with half integer values for spin are called Fermions and the rest as Bosons . The model requires several bosons like the photon as carriers of different type of interaction whereas fermions called quarks and leptons are considered as building blocks of matter. Leptons consist of the familiar electron and unfamiliar particles like neutrinos and muons. However, well known particles like protons and neutrons are NOT in the list of the elementary particles. This is because they are considered as mixtures of quarks. How quarks came to be regarded as fundamental is an integral part of history of particle physics
The beginning of 20th century saw man take a deeper look into atoms which had been postulated long time ago . It was found that the atom consists of 3 particles - electron, proton and neutron -which were all considered elementary. However, from 1930s onwards there were many more particles detected by cosmic ray experiments in the next few decades: (a) the Positron, the anti particle of electron and an example of symmetry in nature (b) Medium mass ( between that of electron and proton) particles called Pi mesons , the carrier of the nuclear forces and a seemingly purposeless particle called the muon which could penetrate a large amount of matter (c) Strange particles which were later categorized as K mesons, Hyperons (also classified as baryons along with proton and neutron) etc. But with time the accelerators came on the scene and a plethora pf particles were detected which consisted of hitherto unknown mesons and baryons. These were not stable like the proton and were also short lived. With so many new particles, it was natural to wonder whether they were all really fundamental . The new discoveries were parodied when it was said " that each discovery should be fined 10000 dollars !"
It was Murray Gell-mann who brought order into this world of chaos in 1964.He seasoned that the basis of all the baryons and mesons is a triplet which he called Quarks after a phrase in the great Irish writer James Joyce's Finnegan’s Wake. The revolutionary aspect was that these Quarks have non integer charge like 1/3 and 2/3 unlike particles like proton, electron etc ; however, they

would have spin half like other fermions. The three quarks were called UP, DOWN and STRANGE with their antiparticles (UP BAR etc ) to conserve symmetry. Protons are made up of three ( 2 UP and 1 DOWN ) quarks while Pi plus Meson two (1 UP and 1 DOWN BAR) quarks . While these particles need only 2 types of quarks, K mesons , Hyperons etc need at least one strange quark . With time 3 more types of quarks were proposed - C(CHARM), B(BOTTOM )and T (TOP) - and they have all been detected in the laboratory. Top, the heaviest quark with about 175 times the mass of the proton was discovered 20 years ago in Fermilab in Chicago. The standard model has also been deemed complete after the discovery of the famous Higgs Boson in 2013 in LHC in Geneva.
Quarks were considered as just mathematical entities for quite some time since many experiments to detect quarks gave null results . However scattering experiments at Stanford showed that just like atom has nucleus as a hard constituent , proton also has three hard constituents which could be identified with quarks (also called Partons by Feynman) .There are also models of exotic forces to explain why quarks cannot be isolated and thus confined to be within baryons and mesons. Apart from electric charge, quarks also have another charge called the Color charge which can have three values represented by red, blue and green. These three “colors” add up to  colorless particles like protons and neutrons in the same way that red, green, and blue light combine to create a white glow. Thus color is not seen in the outside world . Because
of color , there are actually 36 quarks !

PENTAQUARKS

At the time of the original theory itself , possible mixtures of more than 3 quarks had been suggested. The strong interaction theory also does not forbid exotic type of particles like Tetra (4), Penta(5) and Hexa(6) quarks. While no search till recently had given conclusive results about such particles, last year a group working on the CERN’s Large Hadron Collider(LHC) claimed detection of Pentaquarks with high significance. The data have been further analyzed and two new studies published this month show that evidence for Pentaquarks is robust. Since then the same experiment has also detected few Tetraquarks, a combination of 4 quarks.
In the LHC, two protons collide at very high energy to create various new particles and lot of normal particle debris . Thus any new search is better done slightly away from the debris. The present experiment showed that the collision occasionally produces bottom quarks which travel a short distance and then decay into a Pentaquark plus other particles all of which are recognized and registered in a a series of detectors. The experiment has evidence for two new Pentaquarks with masses of about 4.4 GeV, four times that of a proton.  There are two ways to envision the Pentaquark: it could be thought of as a baryon and a meson (specifically, proton and a J/psi meson) 'molecule' bound together or as a mixture of 4 quarks and an anti quark ( specifically 2 UP,1 DOWN , 1 CHARM and 1 ANTI CHARM ). It is considered colorless.
Scientists believe that this discovery of the Pentaquark is just the tip of the iceberg . According to them it is not just another new particle and thus studying its properties allows one to understand better even ordinary matter apart from complex forces between quarks . Gell-mann , the discoverer of the quarks ,said that " ..In the future they may find more and more combinations.." It is also expected to throw light on interactions at the core of neutron stars and the possible existence of Quark Stars.
------------------------------------------------------------------------------------------------
(text has about 1090 words)
Pl try to include these figures, at least Fig 2
Fig 1 - The fundamental particles as of today
Fig 2 : Various quark mixtures
------------------------------------------------------



Thursday, August 11, 2016

ಶೂನ್ಯದ ಬೆನ್ನೆತ್ತಿ ( ಸ೦ಪೂರ್ಣ ನಿರ್ವಾತ?) - ಪಾಲಹಳ್ಳಿ ವಿಶ್ವನಾಥ್ Palahalli Vishwanath

appeared in Sep-Oct 2016 VIGYANA LOKA

ಸ೦ಪೂರ್ಣ ನಿರ್ವಾತ ?
ಪಾಲಹಳ್ಳಿ ವಿಶ್ವನಾಥ್
( ಭೌತಿಕ ಜಗತ್ತಿನಲ್ಲಿ sಸ೦ಪೂರ್ಣ ಶೂನ್ಯ/ನಿರ್ವಾತ ಸಾಧ್ಯವೆ? ಪಾಸ್ಕಲ್ ರಿ೦ದ ಐನ್ಸ್ ಟೈನರ ತನಕ ನಿರ್ವಾತದ ವಿವಿಧ ವ್ಯಾಖ್ಯಾನಗಳು !)

" ಸೆಪ್ಟೆಂಬರ್ ೧೯ರ ಬೆಳಿಗ್ಗೆ ೮ ಗಂಟೆಗೆ ಬೆಟ್ಟದ ತಪ್ಪಲಿಗೆ ಹೋದೆವು. ಈ ಪ್ರಯೋಗ ನಡೆಸಿಕೊಡಲು ಬುದ್ಧಿವಂತರಾಗಿದ್ದು ಆಸಕ್ತಿಯೂ ಇದ್ದ ಹಲವು ಜನರು ನನ್ನ್ನ ಜೊತೆ ಇದ್ದರು. ನನ್ನ ಬಳಿ ಇದ್ದ ಎರಡು ಉಪಕರಣಗಳಲ್ಲೂ ಪಾದರಸದ ಮಟ್ಟ ೭೧೧ ಮಿಲಿಮೀಟರ್ ಇದ್ದಿತು. ನಂತರ ಒಂ ದು ಸಾಧನವನ್ನು ಧರ್ಮಶ್ರದ್ಧೆಯುಳ್ಳ ಫಾದರ್ ಚಾಸ್ವ್ಟಿನ್ ರವರಿಗೆ ಕೊಟ್ಟು ಆಗಾಗ್ಗೆ ಪಾದರಸದ ಮಟ್ಟವನ್ನು ದಾಖಲಿಸುತ್ತಿರಿ ಎಂದು ಕೇಳಿಕೊಂಡೆ .... ಇನ್ನೊಂದು ಸಾಧನವನ್ನು ನನ್ನ ಬಳಿಯೇ ಇರಿಸಿಕೊಂಡು ಜೊತೆಯವರೊಂದಿಗೆ ಬೆಟ್ಟವನ್ನು ಹತ್ತಿದೆ. ಅಲ್ಲಿ ತಲುಪಿದಾಗ ಕೊಳವೆಯಲ್ಲಿ ಪಾದರಸದ ಮಟ್ಟ ೬೨೭ ಮಿಲಿಮೀಟರ್ ಎಂದು ಕಾಣಿಸಿತು. ಪರ್ವತದ ಮೇಲೆ ಹಲವಾರು ಕಡೆ ಪಾದರಸದ ಮಟ್ಟ ಇದೇ ಮೌಲವನ್ನು ಹೊಂದಿತ್ತು. ಆದ್ದರಿಂದ ಮೇಲೆ ಮತ್ತು ಕೆಳಗಿನ ಗಾಳಿಯ ಒತ್ತಡದಲ್ಲಿ ೮೪ ಮಿಮೀ ವ್ಯತ್ಯಾಸ ಕಾಣಿಸಿದೆ "
. ಪ್ಯಾರಿಸ್ ನಗರಕ್ಕೆ ೪೪೦ಕಿಮೀ ದೂರದಲ್ಲ್ಲಿದ್ದು ಕ್ಲೇರ್ಮಾಂಟ್ ಎನ್ನುವ ಊರಿನ ಬಳಿ ಯ ೧೩೦೦ ಮೀಟರ್ ಎತ್ತರದ ಬೆಟ್ಟದ ಮೇಲೆ ೧೬೪೮ರಲ್ಲಿ ನಡೆದ ಪ್ರಯೋಗವಿದು. ಶತಮಾನಗಳಿಂದ ನಿಗೂಢವಾಗಿದ್ದ ಶೂನ್ಯದ ರಹಸ್ಯವನ್ನು ತಿಳಿಯಲು ನಡೆಸಿದ ಈ ಪ್ರಯತ್ನ ವಿಜ್ಞಾನದ ಇತಿಹಾಸದಲ್ಲಿ ಪ್ರಯೋಗ ಗಳ ಅವಶ್ಜ್ಯಕತೆಯನ್ನು ಎತ್ತಿ ತೋರಿಸಿತು.
ಪ್ರಪಂಚದಲ್ಲಿ ಏನೂ , ಅಂದರೆ ಏನೂ, ಇಲ್ಲದಿರುವ ಸ್ಥಳ ಇದೆಯೇ? ಇಲ್ಲ ಅನಿಸುತ್ತೆ ಅಲ್ಲವೆ? ಇದನ್ನೆ ಗ್ರೀಕ್ ವಿಜ್ಞಾನಿಗಳು ೨ ಸಹಸ್ರಮಾನಗಳಿಗೂ ಮುಂಚೆ ಒತ್ತಿ ಒತ್ತಿ ಹೇಳಿದರು. ಅಂತಹದ್ದು ಏನಾದರೂ ಇದ್ದರೆ ಅದಕ್ಕೆ ಶೂನ್ಯ ಅಥವಾ ನಿರ್ವಾತವೆಂಬ ಹೆಸರಿಟ್ಟು ಪ್ರಕೃತಿಗೆ ನಿರ್ವಾತವೆಂದರೆ ಆಗುವುದಿಲ್ಲ (ನೆಚರ್ ಅಭೋರ್ಸ್ ವ್ಯಾಕ್ಯುಮ್) ಎಂದು ಅರಿಸ್ಟಾಟಲ್ ಮಾತ್ತು ಇತರರು ಪ್ರಚಾರಿಸಿದರು. ಎಲ್ಲೆಲ್ಲೂ ಇರುವುದು ದ್ರವ್ಯರಾಶಿ ಮತ್ತು ಸ್ವಲ್ಪವೂ ದ್ರವ್ಯರಾಶಿ ಇರದ ಸ್ಥಳವೇ ಇಲ್ಲ ಎಂದು ಅವರ ನ೦ಬಿಕೆಯಾಗಿದ್ದು ಗ್ರೀಕರ ಹಲವಾರು ತಪ್ಪು ಕಲ್ಪನೆಗಳೊ೦ದಿಗೆ ಇದೂ ಸೇರಿಕೊಂಡಿತು. ಯೂರೋಪಿನ ನವೋದಯ ಸಮಯದಲ್ಲಿ ಅನೇಕ ಕ್ಷೇತ್ರಗಳಂತೆ ವಿಜ್ಞಾನದಲ್ಲೂ ಹೊಸಗಾಳಿ ಬೀಸಲಾರಂಭಿಸಿ ನೀರಿನ ತರಹವೇ ಗಾಳಿಯಿ೦ದಲೂ ಒತ್ತಡ ಉ೦ಟಾಗುತ್ತದೆ ಎ೦ಬ ಅಭಿಪ್ರಾಯ ಹುಟ್ಟಿತು. ೧೬ನೆಯ ಶತಮಾನದ ಕಡೆಯ ದಶಕಗಳಲ್ಲಿ ಪೀಸಾ ಮತ್ತು ಪಡುವಾ ನಗರಗಳಲ್ಲಿ ಗೆಲೆಲಿಯೊ (೧೫೬೪-೧೬೪೨) ಪ್ರಯೋಗಗಳನ್ನು ನಡೆಸಿ ಗ್ರೀಕರಿಗೆ ಚಲನ ವಿಜ್ಞಾನದ ಬಗ್ಗೆ ಇದ್ದ ಹಲವಾರು ನ೦ಬಿಕೆಗಳು ತಪ್ಪು ಎಂದು ತೋರಿಸಿ " ನಿರ್ವಾತವನ್ನು ನಾವು ಇನ್ನೂ (ಉಪಕರಣಗಳಿ೦ದ ) ಗುರುತಿಸಿಲ್ಲವಾದರಿ೦ದ ಅದು ಇದೆ ಅಥವ ಇಲ್ಲ ಎಂದು ಹೇಗೆ ಹೇಳುವುದು ? " ಎಂದು ಪ್ರಶ್ನಿಸಿದ್ದನು. ಆದ್ದರಿಂದ ಪ್ರಯೋಗಗಳೇ ನಿರ್ವಾತದ ಬಗ್ಗೆ ಕಡೆಯ ಮಾತುಗಳನ್ನು ಹೇಳಲು ಸಾಧ್ಯ ಎಂದು ವಿಜ್ಞಾನಿಗಳೆಗೆ ಅರಿವಾಗಿ ಮುಂದಿನ ಹೆಜ್ಜೆಯನ್ನು ಇಟ್ಟವನು ಗೆಲೆಲ್ಲಿಯೊವಿನ ಕಡೆಗಾಲದ ಶಿಷ್ಯ ಎವ್ಯ೦ಜಲೆಸ್ಟ ಟಾರಿಸಿಲಿ (೧೬೦೮-೧೬೪೭) .ಇಟಲಿಯಲ್ಲಿ ಗಾಳಿಯ ಬಗ್ಗೆ ಪ್ರಯೋಗಗಳಿಗೆ ಕೊಳವೆಗಳಲ್ಲಿ ನೀರನ್ನು ಬಳಸುತ್ತಿಸಿದ್ದರು. ಆದರೆ ನೀರಿಗಿ೦ತ ೧೪ರಷ್ಟು ಸಾಂದ್ರತೆ ಹೆಚ್ಚಿರುವ ಪಾದರಸವನ್ನು ಬಳಸಿಕೊಂಡಲ್ಲಿ ಕೊಳವೆಗಳು ಚಿಕ್ಕದಾಗುತ್ತವೆ. ನಾಲ್ಕು ಅಡಿ ಉದ್ದದ ಗಾಜಿನ ಕೊಳವೆಯಲ್ಲಿ
ಪಾದರಸವನ್ನು ಸುರಿದು ಬೆರಳಿನಿಂದ ಅದರ ತೆರೆದ ಭಾಗವನ್ನು ಮುಚ್ಚಿ ಅದನ್ನು ಪಾದರಸ ಇರುವ ಪಾತ್ರೆಯಲ್ಲಿ ಇರಿಸಿದಾಗ ಪಾದರಸ ದ್ರವ ಕೆಳಗೆ ಇಳಿದು ಕೊಳವೆಯ ಮೇಲು ಭಾಗ ಸ್ವಲ್ಪ ಖಾಲಿಯಾಯಿತು; ಹಾಗೂ ಕೊಳವೆಯಲ್ಲಿ ಉಳಿದ ಪಾದರಸದ ಮಟ್ಟ ೭೬ ಸೆಂಟಿಮೀಟರುಗಳು ಎಂದು ಕಂಡುಬಂದಿತು. ಇದರಿ೦ದ ಟಾರಿಸಿಲಿ ಗಾಳಿಗೆ ಒತ್ತಡವಿದೆಯೆಂದು ತೋರಿಸಿ ಕೊಳವೆಯ ಮೇಲಿನ ಖಾಲಿ ಭಾಗದಲ್ಲಿ ಇರುವುದೇ ನಿರ್ವಾತ ಎಂದು ಮಂಡಿಸಿದನು. ಹಾಗೆಯೇ ಕೊಳವೆಯಲ್ಲಿ ಪಾದರಸದ ಎತ್ತರ ದಲ್ಲಿ ಕಾಣಬರುವ ದೈನಿಕ ವ್ಯತ್ಯಾಸಗಳು ವಾತಾವರಣದ ಗಾಳಿಯ ಒತ್ತಡದ ಬದಲಾವಣೆಯಿ೦ದ ಎಂದು ಗುರುತಿಸಿದನು.
ಟಾರಿಸಿಲಿಯ ಪ್ರಯೋಗಗಳನ್ನು ಮತ್ತೂ ಸುಧಾರಿಸಿದವನು ಪ್ರಪಂಚದ ಮಹಾ ಪ್ರಭೃತಿಗಳಲ್ಲಿ ಒಬ್ಬನಾದ ಬ್ಲೈಸ್ ಪಾಸ್ಕಲ್(೧೬೨೩-೧೬೬೨) . ಟಾರಿಸಿಲಿಯಂತೆಯೇ ಅಲ್ಪಾಯುಷಿಯಾದ ಪಾಸ್ಕಲ್ ಅನೇಕ ಕ್ಷೇತ್ರಗಳಲ್ಲಿ ಮಹತ್ವದ ಆವಿಷ್ಕಾರಗಳನ್ನು ಮಾಡಿದನು. ಅವನ ಆಸಕ್ತಿಗಳಲ್ಲಿ ಮುಖ್ಯವಾದವು - ಗಣಿತ, ಭೌತವಿಜ್ಞಾನ, ಗಣಕವಿಜ್ಞಾನ, ತತ್ವಶಾಸ್ತ್ರ, ಮತ್ತು ಧರ್ಮಶಾಸ್ತ್ರ. ಅವನ ತಂದೆ ಎಟಿನ್ ಸ್ವತ: ಗಣಿತ ದಲ್ಲಿ ಅಸಕ್ತಿ ಹೊಂದಿದ್ದು ಮಗನಿಗೆ ಉತ್ತೇಜನ ಕೊಟ್ಟನು. ತನ್ನ ತಂದೆಗೆ ಅನುಕೂಲವಾಗಲೆಂದು ೧೯ನೆಯ ವರ್ಷದಲ್ಲಿ ಪ್ರಪಂಚದ ಪ್ರಥಮ ಕ್ಯಾಲ್ಕ್ಯುಲೇಟರ್ ಅನ್ನು ತಯಾರಿಸಿದನು.; ೧೯೫೦ರ ಸಮಯದ ಕ್ಯಾಲ್ಕ್ಯುಲೇಟರುಗಳು ಪಾಸ್ಕಲನ ಯಂತ್ರದ ತರಹವೇ ಇದ್ದವು ! ತನ್ನ ೩೦-೩೧ನೆಯ ವಯಸ್ಸಿನಲ್ಲಿ ಸಂಖ್ಯಾಕಲನ - ಸ್ತ್ಯಾಟ್ಸಿಟಿಕ್ಸ್ - ಶಾಸ್ತ್ರಕ್ಕೆ ಜನ್ಮ ಕೊಟ್ಟನು. ಆದರೂ ಒಂದು ಜೀವನ ಚರಿತ್ರೆಯಪ್ರಕಾರ ಗಣಿತ ಶಾಸ್ತ್ರದಲ್ಲಿ ಅವನಿಗೆ ಮತ್ತೂ ಹೆಚ್ಚು ಜ್ಞಾನವಿದ್ದು ಅವನು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ೧೬೫೦ರ ನಂತರ ಅವನು ಧರ್ಮಶಾಸ್ತ್ರ ಮತ್ತು ತತ್ವಶಾಸ್ತ್ರಗಳತ್ತ ತಿರುಗಿ ಎರಡು ಪುಸ್ತಕಗಳನ್ನು - ಪೆನ್ಸೆಸ್ನ್ ಮತ್ತು ಲೆಟರ್ಸ್ - ರಚಿಸಿದನು . ಚರ್ಚಿನ ಕೆಲವು ಧಾರ್ಮಿಕ ಪರಂಪರೆಗಳನ್ನು ಖಂಡಿಸಿದ್ದ ಲೆಟರ್ಸ್ ಪುಸ್ತಕವನ್ನು ಚಕ್ರವರ್ತಿಯ ಆಜ್ಞೆಯ ಪ್ರಕಾರ ಸುಡಲಾಯಿತು; ಆದರೂ ಈ ಎರಡೂ ಪುಸ್ತಕಗಳನ್ನು ಫೆಂಚ್ ಸಾಹಿತ್ಯದ ಮೇರು ಕೃತಿಗಳೆಂದು ಪರಿಗಣಿಸಲಾಗಿದೆ. ತಾರ್ಕಿಕ ಚಿಂತನೆಗೂ ಪಾಸ್ಕಲ್ ಹೆಸರುವಾಸಿಯಾಗಿದ್ದು ವಿಧಾತನು ಇದ್ದಾನೊ ಅಥವಾ ಇಲ್ಲವೋ ಎನ್ನುವ ಬಗ್ಗೆ ಪಾಸ್ಕಲ್ ವೇಜರ್ ಎಂಬ ಒಂದು ಪಣವನ್ನೂ ಇಟ್ಟಿದ್ದನು. ಮೊದಲಿಂದಲೂ ಒಂದಲ್ಲ ಒಂದು ರೀತಿಯ ಖಾಯಿಲೆಯಿಂದ ನರಳುತ್ತಿದ್ದು ಕಡೆಯಲ್ಲಿ ಉದರದ ಕ್ಯಾನ್ಸರಿನಿಂದ ಮೃತನಾದನು. ಅವನನ್ನು ಹಠವಾದಿ, ಜಗಳಗ೦ಟ ಎಂದು ಕರೆದವರೂ ಉಂಟು. ಇಂದು ಅವನ ಹೆಸರಿನಲ್ಲಿ ಚ೦ದ್ರನಲ್ಲಿ ಕುಳಿಯೊಂದಿದೆ , ಒಂದು ಕಂಪ್ಯೂಟರ್ ಭಾಷೆಯೂ ಇದೆ.. ಇವೆಲ್ಲಾ ಅಲ್ಲದೆ ನಿರ್ವಾತ ಮತ್ತು ಗಾಳಿಯ ಒತ್ತಡದ ಬಗ್ಗೆ ಅವನ ಪ್ರಯೋಗಗಳು ಭೌತವಿಜ್ಞಾನದಲ್ಲಿ ಮಹತ್ವದ ಸ್ಥಾನವನ್ನು ಪಡೆದಿದ್ದು ಅವನ ಹೆಸರಿನಲ್ಲಿ ಒತ್ತಡಕ್ಕೆ ಒಂದು ಏಕಮಾನವೂ ಇದೆ.
ಭೂಮಿಯಿಂದ ಮೇಲೆ ಹೋಗುತ್ತ ಗಾಳಿಯ ಒತ್ತಡ ಕಡಿಮೆಯಾಗಬಹುದು ಎಂಬ ಟಾರಿಸಿಲಿಯ ಅಭಿಪ್ರಾಯವನ್ನು ಪರೀಕ್ಷಿಸಲು ಪಾಸ್ಕಲ್ ಒಂದು ಬೆಟ್ಟವನ್ನು ಆರಿಸಿ ತನ್ನ ಭಾವನ ಕೈಲಿ ಮೇಲೆ ವಿವರಿಸಿದ ಪ್ರಯೋಗವನ್ನು ನಡೆಸಿಸಿದನು. ಈ ಪ್ರಯೋಗ ಭೂಮಿಯಿ೦ದ ಮೇಲೆಹೋಗುತ್ತಾ ಗಾಳಿಯ ಒತ್ತಡ ಕಡಿಮೆಯಾಗುತ್ತದೆ ಎಂದು ತೋರಿಸಿತು. . ಇದನ್ನು ತಿಳಿದ ನಂತರ ಪ್ಯಾರಿಸ್ ನಲ್ಲೂ ಪಾಸ್ಕಲ್ ಅಲ್ಲಿಯ ಚರ್ಚಿನ ಎತ್ತರದ ಗೋಪುರ ವನ್ನು ಹತ್ತಿ ಪ್ರಯೋಗವನ್ನು ನಡೆಸಿದನು( ೩೦೦೦ ಮೀಟರಿನ ಎತ್ತರಲ್ಲಿರುವ ಲಡಾಖಿನ ಲೇಹ ಮತ್ತು ~೮೮೦೦ ಮೀಟರಿನ ಗೌರೀಶಿಖರದಲ್ಲಿ ಗಾಳಿಯ ಒತ್ತಡ ಸಮುದ್ರ ತೀರದಕ್ಕಿ೦ತ ೬೦ % ಮತ್ತು ೩೩ % ಮಾತ್ರ ) ತನ್ನ ಪ್ರಯೋಗಗಳಿ೦ದ ಪಾಸ್ಕಲ್ ಈ ನಿರ್ಧಾರಕ್ಕೆ ಬ೦ದನು " ಗಾಳಿಗೆ ತೂಕವಿದೆ; ಆ ತೂಕ ಎಲ್ಲ ಕಡೆಯೂ ಒ೦ದೇ ಇರುವುದಿಲ್ಲ. ಪರ್ವತ ಪ್ರದೇಶಗಳಲ್ಲಿ ಆ ತೂಕ ಕಡಿಮೆ ಇರುತ್ತದೆ. ಗಾಳಿಯ ತೂಕದಿ೦ದ ಒತ್ತಡ
ಉ೦ಟಾಗುತ್ತದೆ" ಇದಲ್ಲದೆ ವೈಜ್ಞಾನಿಕ ವಿಧಾನಗಳ ಬಗ್ಗೆ ಪಾಸ್ಕಲ್ ಎಚ್ಚರಕೊಡುತ್ತಾನೆ : " ರಿಸ್ಟಾಟಲಿನ ಶಿಷ್ಯರೆಲ್ಲಾ ಕಲಿತುಕೊಳ್ಳಿರಿ .. ಭೌತ ವಿಜ್ಞಾನದಲ್ಲಿ ಪ್ರಯೋಗ ಮಾತ್ರ ನಿಜ ಸ್ಥಿತಿಯನ್ನು ತೋರಿಸಬಲ್ಲದು." ಕಾಲದ ಮತ್ತೊಬ್ಬ ಮಹಾ ವಿಜ್ಞಾನಿ ಡೆಕಾರ್ಟ್ ಪಾಸ್ಕಲನ ಅಭಿಪ್ರಾಯಗಳನ್ನು ಒಪ್ಪಿಕೊಳ್ಳದೆ ಪಾಸ್ಕಲನ ತಲೆಯಲ್ಲೆಲ್ಲ್ಲ ಬರೇ ನಿರ್ವಾತ ತುಂಬಿಕೊ೦ಡಿದೆ ಎಂದು ಅವಹೇಳನೆ ಮಾಡಿದನಂತೆ!
ಕೆಲವೇ ವರ್ಷಗಳ ನಂತರ ಜರ್ಮನಿಯ ಮ್ಯಾಗ್^ಡೆನ್ಬರ್ಗ್ ನಗರದ ರಾಜಕಾರಣಿ ಮತ್ತು ವಿಜ್ಞಾನಿ ಆಟೊ ವ್ಯಾನ್ ಗ್ಯುರಿಕೆ (೧೬೦೨-೧೬೮೬) ಪ್ರಪಂಚದ ಮೊಟ್ಟಮೊದಲ ಪಂಪನ್ನು ತಯಾರಿಸಿ ನಿರ್ವಾತದ ಬಗ್ಗೆ ಮತ್ತೊಂದು ಮಹತ್ವದ ಪ್ರಯೋಗ ನಡೆಸಿದನು. ಲೋಹದ ಎರಡು ಅರ್ಧ ಗೋಳಗಳನ್ನು ಸೇರಿಸಿ ತನ್ನ ಪ೦ಪಿನಿ೦ದ ಗಾಳಿಯನ್ನು ಆದಷ್ಟೂ ಹೊರತೆಗೆದು ನಿರ್ವಾತವನ್ನು ಉಂಟುಮಾಡಿ ಗೋಳದ ಎರಡು ಕಡೆಗೆ ಕೊಂಡಿಗಳನ್ನು ಬೆಸುಗೆ ಹಾಕಿ ಬಲಪ್ರಯೋಗದಿಂದ ಅರ್ಧ ಗೋಳಗಳನ್ನು ಬೇರ್ಪಡಿಸಲು ಪ್ರಯತ್ನ ಪಟ್ಟನು. ಈ ಪ್ರಯತ್ನಕ್ಕೆ ಎಂಟೆಂಟು ಕುದುರೆಗಳನ್ನು ಬಳಸಿದರೂ ಅರ್ಧ ಗೋಳಗಳನ್ನು ಬೇರ್ಪಡಿಸಲು ಆಗಲಿಲ್ಲ. ಗಾಳಿಯ ಒತ್ತಡ ಅರ್ಧ ಗೋಳಗಳನ್ನು ಒಟ್ಟಾಗಿ ಇಟ್ಟಿತ್ತು. ಹಲವಾರು ಸ್ಥಳಗಳಲ್ಲಿ , ಇನ್ನೂ ಹೆಚ್ಚು ಸಂಖ್ಯೆಯ ಕುದುರೆಗಳನ್ನು ಬಳಸಿಕೊಂಡು , ಈ ಪ್ರಯೋಗವನ್ನು ನಡೆಸಿದ್ದು ಇವು ಮ್ಯಾಗ್ಡೆನ್ಬರ್ಗ್ ಗೋಳಗಳು ಎಂ ದು ಖ್ಯಾತಿ ಪಡೆದವು. ಅಂದಿನ ಕಾಲದಲ್ಲಿ ಗೆಲೆಲಿಯೊ, ಪಾಸ್ಕಲ್, ಗ್ಯುರಿಕೆ, ಇತ್ಯಾದಿ ವಿಜ್ಞಾನಿ ಗಳು ತಮ್ಮ ಪ್ರಯೋಗಗಳ ಸಾರ್ವತ್ರಿಕ ಪ್ರದರ್ಶನಗಳನ್ನು ನಡೆಸುತ್ತಿದ್ದರು. ವೈಜ್ಞಾನಿಕ ಪ್ರಕಟಣೆಗಳು ಹೆಚ್ಚು ಇರದಿದ್ದ ಆ ಕಾಲಗಳಲ್ಲಿ ಈ ವೀಕ್ಷಕರು ಈ ಮಹಾ ಪ್ರಯೋಗಗಳಿಗೆ ಸಾಕ್ಷಿಗಳೂ ಆಗುತ್ತಿದ್ದರು. ಇದಲ್ಲದೆ ವಿಜ್ಞಾನಕ್ಕೆ ಸಾಕಷ್ಟು ಪ್ರಚಾರವೂ ಸಿಗುತ್ತಿತ್ತು.
ನಂತರದ ಶತಮಾನಗಳಲ್ಲಿ ಆದಷ್ಟೂ ಹೆಚ್ಚು ನಿರ್ವಾತವನ್ನು ಸಾಧಿಸುವುದು ಅನೇಕ ವಿಜ್ಞಾನಿಗಳ ಧ್ಯೇಯವಾಯಿತು. ಬಾಯಲ್, ಹುಕ್, ಹಾಯ್ಘೆನ್ಸ್ ಇತ್ಯಾದಿ ವಿಜ್ಞಾನಿಗಳು ಈ ಪ್ರಯತ್ನದಲ್ಲಿ ಪಾಲುಗೊಂಡಿದ್ದರು. ಟಾರ್ ಎನ್ನುವುದು ಒತ್ತಡದ ಒಂದು ಅಳತೆಯಾಗಿದ್ದು ಸಮುದ್ರತೀರದಲ್ಲಿ ವಾತಾವರಣದ ಒತ್ತಡವನ್ನು ಪಾದರಸದ ೭೬೦ಮಿಲಿಮೀಟರ್ / ಟಾರ್ ಗಳು ಎಂದು ಪರಿಗಣಿಸಬಹುದು. ನೂರು ಕಿಮೀ ಎತ್ತರದಲ್ಲಿ ವಾತಾವರಣದ ಒತ್ತಡ ~ಮೈಕ್ರೊಟಾರ್. ಉದಾ ವ್ಯಾಕ್ಯುಮ್ ಕ್ಲೀನರ್ ನಿಂದ ೨೫ ಟಾರ್ ನಿರ್ವಾತವನ್ನು ಗಳಿಸಬಹುದು. ಸಾಧಾರಣ ಪಂಪುಗಳಿ೦ದ ಒಂದು ನ್ಯಾನೊ ಟಾರ್ ( ಬಿಲಿಯದಲ್ಲಿ ಒ೦ದು ಭಾಗ) ಸಾಧ್ಯವಾಗುತ್ತದೆ. ಈಗಿನ ಅತಿ ಉತ್ತಮ ಉಪಕರಣಗಳಿಂದ ಒ೦ದು ಪೈಕೊ ಟಾರ್ ( ಸಾವಿರ ಟ್ರಿಲಿಯದಲ್ಲಿ ಒಂದು ಭಾಗ) ನಿರ್ವಾತ ಸಾಧ್ಯವಾಗಿದೆ .ಬಾಹ್ಯಾಕಾಶದಲ್ಲಿ ಇದಕ್ಕಿಂತ ಹತ್ತುಸಾವಿರದಷ್ಟು ಕಡಿಮೆ ನಿರ್ವಾತ ಇರುವ ಸಾಧ್ಯತೆ ಇದೆ. ನಿರ್ವಾತಕ್ಕೆ ಕ್ರಮೇಣ ಅನೇಕ ಉಪಯೋಗಗಳು ಕಂಡುಬಂದವು. ೧೮೭೯ರಲ್ಲಿ ಥಾಮಸ್ ಆಲ್ವ ಎಡಿಸನ್ ಕಂಡುಹಿಡಿದ ವಿದ್ಯುತ್ ಬಲ್ಬಿನ ತಯಾರಿಕೆಗೆ ಒಂದು ಮಿಲಿಟಾರ್ (ಟಾರ್ ನ ಸಾವಿರದ ಒ೦ದು ಭಾಗ) ನಿರ್ವಾತ ಬೇಕಾಯಿತು. ಆಧುನಿಕ ಜಗತ್ತಿನಲ್ಲಿ ನಿರ್ವಾತದ ಬಳಕೆ ಎಲ್ಲೆಲ್ಲೂ ಇದ್ದು ಅದರ ಅಳತೆಯಲ್ಲಾದರೂ ಅಧ್ಯಯನದ ಪಿತಾಮಹರಾದ ಟಾರಿಸಿಲಿ ಮತ್ತು ಪಾಸ್ಕಲ್ ರನ್ನು ನೆನಪು ಮಾಡಿಕೊಳ್ಳಬಹುದು!.

ಒಳ್ಳೆಯ ಮಟ್ಟದ ನಿರ್ವಾತ ಬೇಕಾದ್ದಲ್ಲಿ ಒಂದು ಸ್ಥಳದಿ೦ದ ಅಲ್ಲಿ ಇರುವ ಎಲ್ಲ ತರಹ ದ್ರವ್ಯರಾಶಿಗಳನ್ನೂ ತೆಗೆದುಹಾಕಲು ಪ್ರಯತ್ನಿಸಬೇಕು. ಹಾಗೂ ಕೆಲವು ಕಣಗಳು ಉಳಿದುಕೊಳ್ಳಬಹುದು; ಇದು ಪ್ರಯೋಗಕ್ಕೆ ಎಟುಕುವ ಶೂನ್ಯ. ಆದರೆ ಇಂದು ಭೌತವಿಜ್ಞಾನದಲ್ಲಿ ಶೂನ್ಯಕ್ಕೆ ಮತ್ತೊಂದು ವ್ಯಾಖ್ಯಾನವಿದ್ದು ಅದು ಶೂನ್ಯಕ್ಕೆ ಚೈತನ್ಯ/ಶಕ್ತಿಯ ನ್ನು ಆವಾಹನೆ ಮಾಡುತ್ತದೆ. ಎಡ್ವರ್ಡ್ ಹಬಲ್ ೧೯೩೦ರ ದಶಕದಲ್ಲಿ ಜಗತ್ತು ವಿಸ್ತಾರವಾಗುತ್ತಿದೆ ಎಂದು ಮ೦ಡಿಸಿದನಷ್ಟೆ. ಕಳೆದ ದಶಕದಲ್ಲಿ ಜಗತ್ತಿನ ವಿಸ್ತಾರ ನಿರೀಕ್ಷಿಸಿದ್ದಕ್ಕಿ೦ತ ಹೆಚ್ಚುತ್ತಿದೆ ಎಂದು ಕ೦ಡುಬಂದು ಆ ಅವಿಷ್ಕಾರ ಇತ್ತೀಚೆಗೆ ನೊಬೆಲ್ ಪ್ರಶಸ್ತಿಯನ್ನೂ‌ ಗಳಿಸಿತು. ಈ ವೇಗೋತ್ಕರ್ಷಕ್ಕೆ ಯಾವುದೋ‌ ಅಗೋಚರ ಚೈತನ್ಯ - ಡಾರ್ಕ್ ಎನರ್ಜಿ- ಕಾರಣವೆಂದು ಈಗ ಅರ್ಥವಾಗಿದೆ. ೧೯೧೭ರಲ್ಲಿ ಆಲ್ಬರ್ಟ್ ಐನ್ಸ್ ಟೈನ್ ತಮ್ಮ ವಿಶ್ವಸಿದ್ಧಾ೦ತವನ್ನು ಪ್ರತಿಪಾದಿಸಿದಾಗ ಅವರ ಸಮೀಕರಣದಲ್ಲಿ ಒಂದು ನಿಯತಾಂಕ - ಕಾಸ್ಮೊಲಾಜಿಕಲ್ ಕಾನ್ಸ್ಟೆಂಟ್- ವನ್ನು ಸೇರಿಸಿದ್ದರು. ವಿಶ್ವ ಅಚಲ ಎ೦ಬ ನ೦ಬಿಕೆ ಆಗ ಇದ್ದಿದ್ದ್ದರಿ೦ದ ಈ ನಿಯತಾ೦ಕ ಗುರುತ್ವವನ್ನು ಎದುರಿಸಿ ವಿಶ್ವವನ್ನು ಹಿಗ್ಗಿಸುವ ಶಕ್ತಿಯ ಸ೦ಕೇತವಾಗಿದ್ದಿತು. ಆದರೆ ವಿಶ್ವ ಅಚಲವಲ್ಲ ಮತ್ತು ವಿಸ್ತಾರವಾಗುತ್ತಿದೆ ಎಂದು ತಿಳಿದ ನಂತರ ಐನ್ಸ್ ಟೈನ್ನ್ ಆ ನಿಯತಾಂಕ ಉಪಯೋಗವಿಲ್ಲ ಮತ್ತು ಅದು ನನ್ನ ತಪ್ಪು ಎಂದಿದ್ದರು. ವಿಶ್ವದ ವೇಗೋತ್ಕರ್ಷದ ಆವಿಷ್ಕಾರದ ನ೦ತರ ಐನ್ ಸ್ಟೈನರ ನಿಯತಾಂಕವನ್ನು ಅಗೋಚರ ಚೈತನ್ಯದ ಸಂಕೇತವೆಂದು ಕೆಲವು ವಿಜ್ಞಾನಿಗಳು ನಂಬುತ್ತಾರೆ. ಶೂನ್ಯದ ಚೈತನ್ಯವೇ ಅಗೋಚರ ಚೈತನ್ಯಕ್ಕೆ ಕಾರಣ ವಿರಬಹುದಾದ್ದರಿಂದ ಐನ್ ಸ್ಟೈನರ ನಿಯತಾಂಕ ಶೂನ್ಯದ ಚೈತನ್ಯನ್ನು ಪ್ರತಿನಿಧಿಸುತ್ತಿರಬಹುದಲ್ಲವೇ ಎಂದು ವಿಜ್ಞಾನಿಗಳು ಈಗ ಕೇಳುತ್ತಿದ್ದಾರೆ !
--------------------------------------------------------------------------
 
ಚಿತ್ರಗಳು
. ಪಾಸ್ಕಲ್ (೧೬೨೩-೧೬೬೨
() ಟಾರಿಸಿಲಿ ( ೧೬೦೮- ೧೬೪೭) ಯ ವಾಯುಮಾಪಕ (ಬಾರೊಮೀಟರ್
() ಆಟೊ ವಾನ್ ಗುರಿಕೆಯ ಪ್ರಯೋಗಗಳ ನೆನಪಿಗೆ ಮ್ಯಾಗ್ ಡೆ ಬರ್ಗ್ ನಗರದಲ್ಲಿ ಒ೦ದು ಶಿಲ್ಪಾಕೃತಿ 
ಚಿತ್ರ ೪. ಒತ್ತಡ ಕಡಿಮೆಯಾಗುತ್ತ ಅನಿಲದ ಮಾಲೆಕ್ಯೂಲಗಳ ಮಧ್ಯೆಯ ದೂರ ಹೆಚ್ಚಾಗುತ್ತ ಹೋಗುತ್ತದೆ: ವೈ ಅಕ್ಷಾ೦ಶದ ಅಳತೆ ಅಡಿಗಳು ( ಕೆಳಗಿನಿ೦ದ ಮೇಲಕ್ಕೆ ಮೌಲ್ಯ ಹೆಚ್ಚಾಗುತ ಹೋಗುತ್ತದೆ) ಮತ್ತು ವೈ ಅಕ್ಷಾ೦ಶ ದ ಅಳತೆ ಟಾರ್ (ಎದದಿ೦ದ ಬಲಕ್ಕೆ ಹೆಚ್ಚಾಗುತ್ತ ಹೋಗುತ್ತದೆ). ಅತಿ ಹೆಚ್ಚು ನಿರ್ವಾತದ ಮೌಲ್ಯ ೧೦**(-) ಟಾರ್ ಗೂ ಕಡಿಮೆ ಇರುತ್ತದೆ : ಅಗ ಮಾಲೆಕ್ಯೂಲಗಳ ಅ೦ತರ ೪೦ ಕಿಮೀಗೂ ಹೆಚ್ಚಿರುತ್ತದೆ . ಬಾಹ್ಯಾಕಾಶದಲ್ಲಿ ಅತಿ ಕಡಿಮೆ ( < ೧೦**(-೧೨) ಟಾರ್ ) ನಿರ್ವಾತದ ಸ೦ಭವವಿದೆ

--